ಉಚಿತ ದಿನಸಿ, ಮಾಸ್ಕ್ ವಿತರಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್
ಹಾವೇರಿ, ಮೇ 2,ಕೋವಿಡ್-19 ಹರಡದಂತೆ ತಡೆಯುವ ಉದ್ದೇಶದಿಂದ ಕೃಷಿ ಸಚಿವ ಬಿ.ಸಿ.ಪಾಟೀಲ್ ಇಂದು ತಾಲೂಕಿನ ಚಿಂದಿ ಆಯುವವರಿಗೆ ಉಚಿತ ದಿನಸಿ ಸಾಮಾನುಗಳನ್ನು ವಿತರಿಸಿದರು.
ಅಲ್ಲದೇ ಆರೋಗ್ಯ ಇಲಾಖೆ, ರಟ್ಟಿಹಳ್ಳಿ, ಹಿರೇಕೆರೂರು ಪಟ್ಟಣ ಪಂಚಾಯಿತಿ ಸಿಬ್ಬಂದಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಉಚಿತ ಮಾಸ್ಕ್ಗಳನ್ನು ವಿತರಿಸಿದರು.ಈ ವೇಳೆ ಚಿಂದಿ ಆಯುವ ಕಾರ್ಮಿಕರನ್ನುದ್ದೇಶಿಸಿ ಮಾತನಾಡಿದ ಕೃಷಿ ಸಚಿವರು, ಸ್ವಚ್ಛತೆ ಜೊತೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕೈಚೀಲ ಹಾಗೂ ಮುಖಗೌಸುಗಳನ್ನು ಧರಿಸಬೇಕು. ಲಾಕ್ ಡೌನ್ ವಿಸ್ತರಣೆಯಿಂದ ಯಾರೂ ಆತಂಕಕ್ಕೊಳಗಬಾರದು. ಸಾಮಾಜಿಕ ಅಂತರವೊಂದೇ ಸದ್ಯಕ್ಕೆ ಕೊರೊನಾದಿಂದ ದೂರ ಉಳಿಯಬಲ್ಲ ಉಪಾಯವಾಗಿದೆ. ಸರ್ಕಾರ ಕಾರ್ಮಿಕರು ಕೃಷಿಕರೂ ಸೇರಿದಂತೆ ಎಲ್ಲರ ನೆರವಿಗೆ ಬದ್ಧವಾಗಿದೆ. ಧೃತಿಗೆಡದೇ ಎಲ್ಲರೂ ಒಟ್ಟಾಗಿ ಈ ಮಹಾಮಾರಿಯನ್ನು ಹೊಡೆದೋಡಿಸಬೇಕೆಂದು ಕರೆ ನೀಡಿದರು. ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು. ಬಿ ಬಣಕಾರ್, ಮಹೇಂದ್ರ ಬಡಳ್ಳಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 