ಸಿಡಿಲು ಬಡಿದು 10 ಕುರಿ ಸಾವು

ದೇವರಹಿಪ್ಪರಗಿ 24: ಗುಡುಗು ಮಿಂಚು ಮಿಶ್ರಿತ ಮಳೆಗೆ ತಾಲೂಕಿನ ಚಿಕ್ಕರೂಗಿ ಗ್ರಾಮದ  ಜಮೀನವೊಂದರಲ್ಲಿ ಸುಬ್ರಾಯ ನಾಟಿಕಾರ ಅವರಿಗೆ ಸೇರಿದ 200 ಕುರಿಗಳಲ್ಲಿ 10 ಕುರಿಗಳಿಗೆ ಸಿಡಿಲು ಬಡಿದು ಮೃತಪಟ್ಟಿರುವ ಘಟನೆ ಬುಧವಾರ ಸಂಜೆ ಗ್ರಾಮದಲ್ಲಿ ನಡೆದಿದೆ.ತಾಲೂಕಿನ ಚಿಕ್ಕರೂಗಿ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ  ಕುರಿಗಳು ಮೇಯಲು ಹೋದಾಗ ಮಳೆ ಗಾಳಿ ರಭಸಕ್ಕೆ ಕುರಿಗಳು ಗಿಡದ ಕೆಳಗೆ ನಿಂತ ಪರಿಣಾಮ ಭಾರಿ ಪ್ರಮಾಣದ ಸಿಡಿಲಿಗೆ ಒಟ್ಟು 10 ಕುರಿಗಳು ಮೃತಪಟ್ಟಿವೆ ಎಂದು ಕುರಿಗಳ ಮಾಲಿಕ ತಿಳಿಸಿದ್ದಾರೆ.ಸ್ಥಳಕ್ಕೆ ಪಿಎಸ್ಐ ಬಸವರಾಜ ತಿಪ್ಪರಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಿಯ ಪಶು ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿದಾಗ ವಿಜಯಪುರದಲ್ಲಿ ಚುನಾವಣೆಯ ಕಾರ್ಯದಲ್ಲಿ ಭಾಗಿಯಾಗಿದ್ದೇನೆ. ಬೆಳಗ್ಗೆ ಸ್ಥಳ ಪರಿಶೀಲನೆ ನಡೆಸಿ ವರದಿಯನ್ನು ತಹಶೀಲ್ದಾರ್ ಅವರಿಗೆ ನೀಡುವದಾಗಿ ತಿಳಿಸಿದರು.ಹಾನಿಗೊಳಗಾದ ಕುರಿಗಾಯಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಲು ಗ್ರಾಮಸ್ಥರಿಂದ ಆಗ್ರಹ.ಫೋಟೋ ೨೪ಡಿಎಚಪಿ೨