ನಿವೃತ್ತಿ ಶಿಕ್ಷಕ ರಹೇಮತ್ ಉಲ್ಲಾ ಶರೀಫ್ಗೆ ತಾಹಿರ ಆಲಿ ಕುಟುಂಬದ ದಿಂದ ಮದುವೆ ಆಮಂತ್ರಣ ಸಲ್ಲಿಕೆ
ಕೊಪ್ಪಳ 10: ಜಿಲ್ಲೆಯ ಅಲ್ಪಸಂಖ್ಯಾತ ಸಮುದಾಯದ ಪ್ರಮುಖ ಮುಖಂಡ ಉದ್ಯಮಿ ಹಾಲಿ ವಸತಿ ಮೈಸೂರಿನ ತಾಹಿರ್ ಅಲಿ ಯವರ ಸುಪುತ್ರಿ ಡಾ, ಸಭಾ ತಝಮೀನ್ ರವರ ಮದುವೆ(ನಿಖಾ) ಹಾಲಿ ವಸತಿ ಬೆಂಗಳೂರಿನ ಡಾ, ಶೇಕ್ ಮುನಾಫ್ ರೊಂದಿಗೆ ನಿಶ್ಚಯಗೊಂಡಿದ್ದು ಕಾರ್ಯಕ್ರಮ ಜೂನ್ 12 ರ ಗುರುವಾರ ದಂದು ಮೈಸೂರಿನಲ್ಲಿ ಜರುಗಲಿದ್ದು ಸದರಿ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಗಣಿತ ವಿಭಾಗದ ನಿವೃತ್ತಿ ಶಿಕ್ಷಕ ರಹೆಮತುಲ್ಲಾ ಶರೀಫ ಅವರ ನಿವಾಸ ಮೈಸೂರ ಮಹಾನಗರಕ್ಕೆ ಭೇಟಿ ಮಾಡಿ ಆಮಂತ್ರಣ ಪತ್ರಿಕೆ ಸಲ್ಲಿಸಿ ಮದುವೆ ಸಮಾರಂಭಕ್ಕೆ ಆಗಮಿಸುವಂತೆ ಮನವಿ ಮಾಡಿಕೊಂಡರು,,
ಅವರ ಮನವಿಗೆ ಸ್ಪಂದಿಸಿದ ಅವರು ಮದುವೆ ಕಾರ್ಯಕ್ರಮ ದಲ್ಲಿ ಭಾಗಿಯಾಗುವುದಾಗಿ ಅಧಿಕೃತ ಭರವಸೆ ನೀಡಿದ್ದಾರೆಎಂದು ವಿವರಿಸಿದ ಅವರು ಮೈಸೂರಿನ ಹಿರಿಯ ನಿವಾಸಿ ಗಣಿತ ವಿಭಾಗದ ನಿವೃತ್ತಿ ಶಿಕ್ಷಕ ರಹೇಮತ್ ಉಲ್ಲಾ ಶರೀಫ್ ಅವರು 1980-81ರಲ್ಲಿ ಕೊಪ್ಪಳದ ಸರ್ಕಾರಿ ಪ್ರೌಢ ಉರ್ದು ಶಾಲೆ ಯಲ್ಲಿ ಗಣಿತ ಶಿಕ್ಷಕರಾಗಿ ನಮಗೆ ವಿದ್ಯಾಭ್ಯಾಸ ಮಾಡಿದ ನಮ್ಮ ನೆಚ್ಚಿನ ಗುರುಗಳಾಗಿದ್ದು ಅವರನ್ನು ಖುದ್ದು ಭೇಟಿಯಾಗಿ ನನ್ನ ಮಗಳ ಮದುವೆಗೆ ಆಗಮಿಸುವಂತೆ ಕೋರಲಾಗಿದೆ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಮತ್ತು ಭಾಗಿಯಾಗುವ ಭರವಸೆ ವ್ಯಕ್ತವಾಗಿದೆ ಎಂದು ತಾಹಿರಅಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅವರೊಂದಿಗೆ ಕೊಪ್ಪಳದ ಹಿರಿಯ ಕಾಂಗ್ರೆಸ್ ಮುಖಂಡ ಎಂ.ವಿಜಾರತ್ ಅಲಿ, ಸೈಯದ್ ರಫೀಕ್ ಪೀರ ಸೇರಿದಂತೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು. ಇದೆ ವೇಳೆ ಗುರುಗಳಿಗೆ ಅವರ ನಿವಾಸಕ್ಕೆ ಭೇಟಿ ನೀಡಿದ ಈ ಶುಭ ಸಂದರ್ಭದಲ್ಲಿ ತಾಹಿರ್ ಅಲಿಯವರ ಸಹೋದರರು ಮತ್ತು ಬೆಂಬಲಿಗರು ಸೇರಿ ಗುರುಗಳನ್ನುಸನ್ಮಾನಿಸಿ ಶುಭ ಕೋರಿದರು