ಪರಿಸರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ - ಡಾ. ಲಿಂಗರಾಜ ಅಂಗಡಿ

Environmental protection is everyone's duty - Dr. Lingaraj Angadi

ಪರಿಸರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ - ಡಾ. ಲಿಂಗರಾಜ ಅಂಗಡಿ 

ಧಾರವಾಡ: 5 ಇಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಡಾ. ಲಿಂಗರಾಜ ಅಂಗಡಿ ಮಾತನಾಡುತ್ತಾ ಪ್ರತಿ ಕುಟುಂಬದವರು ತಮ್ಮ ಮನೆ ಮುಂದೆ ಒಂದು ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕು ಎಂದು ಹೇಳಿದರು. ಪ್ರಾಚಾರ್ಯ  ಡಾ . ಎಸ್ ಎಸ್ ಅಂಗಡಿ, ಡಾ. ಜಿನದತ್ ಹಡಗಲಿ, ಶಾಂತವೀರ ಬೆಟಗೇರಿ, ಮಹಾಂತೇಶ ನರೇಗಲ್, ಸುಮಂಗಲಾ ಅಂಗಡಿ, ಪ್ರಶಾಂತ್ ಅಂಗಡಿ ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. 


ಇತ್ತೀಚಿನ ಸುದ್ದಿ