ಡಾ. ಮುರಿಗೆಪ್ಪ ಹುಟ್ಟು ಹಬ್ಬದಂದು ‘ರಂಗ ಗೀತೆ’ಗಳನ್ನು ಏರಿ್ಡಸಿದೆ
ಧಾರವಾಡ 06: ಕರ್ನಾಟಕ ವಿದ್ಯಾವರ್ಧಕ ಸಂಘವು, ಪ್ರೊ. ಎ. ಮುರಿಗೆಪ್ಪ ದತ್ತಿ ಅಂಗವಾಗಿ ಸಂಜೆ 6 ಗಂಟೆಗೆ ಸಂಘದ ರಾ. ಹ. ದೇಶಪಾಂಡೆ ಸಭಾಭವನದಲ್ಲಿ ಹುಬ್ಬಳ್ಳಿಯ ರಂಗಕಲಾವಿದೆ ಪುಷ್ಪಮಾಲಾ ಅಣ್ಣಿಗೇರಿ ಅವರಿಂದ ‘ರಂಗ ಗೀತೆ’ಗಳನ್ನು ಏರಿ್ಡಸಿದೆ. ಶಿರೂರಿನ ರಂಗ ಕಲಾವಿದರಾದ ಬಸವರಾಜ ಬೆಂಗೇರಿ ಮುಖ್ಯ ಅತಿಥಿಯಾಗಿ ಆಗಮಿಸುವರು. ಧಾರವಾಡ ಕ.ವಿ.ವ ಸಂಘದ ಅಧ್ಯಕ್ಷ ಚಂದ್ರಕಾಂತ ಗುರ್ಪ ಬೆಲ್ಲದ ಅಧ್ಯಕ್ಷತೆ ವಹಿಸುವರು.ಡಾ. ಎ. ಮುರಿಗೆಪ್ಪ ಮತ್ತು ಲೀಲಾ ಮುರಿಗೆಪ್ಪ ಗೌರವ ಉಪಸ್ಥಿತರಿರುವರು. ಆಸಕ್ತ ಸಾಹಿತಿಗಳು, ಚಿಂತಕರು, ಕಲಾವಿದರು, ವಿದ್ಯಾರ್ಥಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ಕೋರಿದ್ದಾರೆ. ಕುಲಪತಿಗಳಾಗಿ ಪ್ರೊ.ಅಂಕದ ಮುರಿಗೆಪ್ಪ ಅವರು ಕರ್ನಾಟಕ ವಿಶ್ವವಿದ್ಯಾಲಯದ ಡಾ.ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದಲ್ಲಿ ಭಾಷಾ ವಿಜ್ಞಾನ ಪ್ರಾಧ್ಯಾಪಕರಾಗಿ, ವಿಭಾಗದ ಅಧ್ಯಕ್ಷರಾಗಿ, ವಿದ್ಯಾರ್ಥಿ ಕಲ್ಯಾಣ ಅಧಿಕಾರಿಯಾಗಿ, ಕಲಾ ನಿಖಾಯದ ಡೀನರಾಗಿ, ಮುದ್ರಣಾಲಯದ ನಿರ್ದೇಶಕರಾಗಿ, ಪ್ರಭಾರ ಕುಲ ಸಚಿವರಾಗಿ, ಅಮೋಘ ಸೇವೆ ಸಲ್ಲಿಸಿದ್ದಾರೆ.
ನಾಡಿನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಕನ್ನಡ ವಿಶ್ವವಿದ್ಯಾಲಯ, ಹಂಪಿ ಕುಲಪತಿಗಳಾಗಿ ಶೈಕ್ಷಣಿಕವಾಗಿ, ಆಡಳಿತಾತ್ಮಕವಾಗಿ ರಚನಾತ್ಮಕವಾಗಿ, ಅದರ ಏಳಿಗೆಗೆ ಶ್ರಮವಹಿಸಿ ದುಡಿದಿದ್ದಾರೆ. ಕನ್ನಡ, ಇಂಗ್ಲೀಷ್, ತಮಿಳು ಭಾಷೆಗಳಲ್ಲಿ ಪರಿಣಿತಿ ಹೊಂದಿದ್ದಾರೆ. ಮೂರೂವರೆ ದಶಕಗಳಿಗೂ ಹೆಚ್ಚು ಕಾಲ ಭಾಷಾ ವಿಜ್ಞಾನ, ಕನ್ನಡ, ಸಾಹಿತ್ಯ ಹಾಗೂ ಜಾನಪದ ಕ್ಷೇತ್ರಗಳಿಗೆ ಮೌಲಿಕಕೊಡುಗೆ ನೀಡಿದ್ದಾರೆ. ಕನ್ನಡ ರಂಗಭೂಮಿ ಕ್ಷೇತ್ರಕ್ಕೂ ಇವರ ಸೇವೆ ಸಂದಿದೆ. ಡಾ. ಮುರಿಗೆಪ್ಪನವರು ಸ್ನೇಹ ಜೀವಿಗಳಾಗಿ, ಮಿತಭಾಷಿಗಳಾಗಿ, ವಿನಯಶೀಲರಾಗಿ, ಸರಳ ಸೌಜನ್ಯ ಗುಣಗಳಿಂದಾಗಿ ಎಲ್ಲರಿಗೂ ಬಹುಬೇಗ ಆಪ್ತರಾಗುವ ಇವರ, ಹುಟ್ಟುಹಬ್ಬದ ಅಮೃತ ಮಹೋತ್ಸವದ ಸುಸಂದರ್ಭದಲ್ಲಿ ಅವರ ಮಕ್ಕಳಾದ ಅಪೂರ್ವ ಮತ್ತು ಅಮೋಘ ಅವರು ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ದತ್ತಿ ನಿಧಿ ಸ್ಥಾಪಿಸಿದ್ದಾರೆ. ಪ್ರತಿವರ್ಷ ಅವರ ಹುಟ್ಟು ಹಬ್ಬದಂದು ಈ ದತ್ತಿಕಾರ್ಯಕ್ರಮ ನಿರಂತರವಾಗಿ ನಡೆದುಕೊಂಡು ಬರಬೇಕೆಂದು ಆಶಿಸಿದ್ದಾರೆ.