ಬಳ್ಳಾರಿ: ಬಾಲಕಿಯರ ಶಿಕ್ಷಣ ಸಮಾಜಕ್ಕೆ ಆಶಾ ಕಿರಣ
ಲೋಕದರ್ಶನ ವರದಿ
ಬಳ್ಳಾರಿ 10: ಸಮಾಜದ ಜನರ ನೋವಿಗೆ ಸ್ಪಂಧಿಸುವ ಮನುಸು ಕೊಡುವ ಶಿಕ್ಷಣ ನಿಮ್ಮದಾಗಲಿ ಎಂದು ಬಳ್ಳಾರಿ ನಗರದ ಶಾಸಕ ಜಿ.ಸೋಮಶೇಖರ ರೆಡ್ಡಿ ಮಾತಡಿದರು.ನಗರದ ಕರ್ನಾಟಕ ಪಬ್ಲಿಕ್ ಸ್ಕೂಲ್ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಬಾಲಕಿಯರಿಗೆ ಶಿಕ್ಷಣ ನೀಡಿದರೆ ಮಾನವ ಸಂಪನ್ಮೂಲದ ಅರ್ಧಭಾಗ ಅಭಿವೃದ್ಧಿ ಹೊಂದಿದಂತೆ. ಅದಕ್ಕಾಗಿಬಾಲಕಿಯರ ಕಾಲೇಜಿಗೆ ಎಲ್ಲಾ ವಿಧದ ಸೌಲಭ್ಯಗಳನ್ನು ಒದಗಿಸುತ್ತೇನೆ ಎಂದು ಭರವಸೆ ನೀಡಿದರು.
ಈಗಾಗಲೆ ಮೂರು ಕೋಟಿಯಲ್ಲಿ 36 ತರಗತಿ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ,20 ಲಕ್ಷದಲ್ಲಿ ಶೌಚಾಲಯ ನಿರ್ಮಿಸಲಾಗುತ್ತಿದೆ, ಅದೇ ರೀತಿ ಶುದ್ಧ ಕುಡಿಯುವ ನೀರಿಗಾಗಿ 20 ಲಕ್ಷ ರೂಪಾಯಿಗಳಲ್ಲಿ ಆರ್.ಓ ನಿರ್ಮಿಸಲಾಗುತ್ತಿದೆ, ಈ ವéರ್ಷ 1900 ವಿದ್ಯಾರ್ಥಿಗಳು ದಾಖಲಾಗಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು. ಬಾಲಕಿಯರ ಪಿಯುಸಿಗೆ ತಮ್ಮ ಶಿಕ್ಷಣ ಮೊಟಕುಗೊಳಿಸದೆ, ಉನ್ನತ ಶಿಕ್ಷಣಕ್ಕೆ ಹೋಗಿ ಉತ್ತಮ ನೌಕರಿ ಪಡೆದು ಕುಟುಂಬಕ್ಕೆ ಹಾಸರೆ ಆಗುವುದಲ್ಲದೆ,ಸಮಾಜಕ್ಕೆ ಬೆನ್ನೇಲಬಾಗಲು ಕರೆನೀಡಿದರು.
ಅದ್ಯಕ್ಷತೆ ವಹಿಸಿಕೊಂಡು ಮಾತನಾಡಿದ ಪ್ರಾಚಾರ್ಯರಾದ ಕೆ.ಎಂ. ಮಹಾಲಿಂಗನ ಗೌಡ ಇವರು ಶಿಕ್ಷಣ ಬಡತನ, ಅಜ್ಞಾನ ಹೋಗಲಾಡಿಸಲು ಅಸ್ತ್ರ ಮಾಡಿಕೊಂಡು ಸಮಾಜದ ಸಮತೆಗೆ ಕಾರಣರಾಗಲು ಕರೆ ನೀಡಿದರು. ಉಪನ್ಯಾಸಕರುಗಳಾದ ಡಾ.ಯು.ಶ್ರಿನಿವಾಸ ಮೂತರ್ಿ, ಪ್ರಾಸ್ತಾವಿಕ ಮಾತುಗಳಾಡಿದರು, ಶ್ಯಾಮಣ್ಣ ವಂದಿಸಿದರು, ಚಾಂದ ಪಾಷ ನಿರೂಪಿಸಿದರು ಶಶಿಧರ ವಂದಿಸಿದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 