ಮನುಷ್ಯ ಮಾನವ ಕುಲಕ್ಕೆ ಬಂದ ನಂತರ ದಾನ-ಧರ್ಮ ಮಾಡುವುದು ತಮ್ಮ ಕರ್ತವ್ಯ : ಶ್ರೀಕಾಂತ ಕನ್ನೂರೆ
After entering the human race, it is one's duty to do charity: Srikanth Kannure
ಲೋಕದರ್ಶನ ವರದಿ
ಸಂಬರಗಿ 07 : ಮನುಷ್ಯ ಮಾನವ ಕುಲಕ್ಕೆ ಬಂದ ನಂತರ ದಾನ-ಧರ್ಮ ಮಾಡುವುದು ತಮ್ಮ ಕರ್ತವ್ಯ. ತಾವು ಕಷ್ಟಪಟ್ಟು ದುಡಿದ ಹಣದಲ್ಲಿ 51 ಸಾವಿರ ರೂಪಾಯಿಗಳನ್ನು ಹನುಮಾನ ದೇವಸ್ಥಾನಕ್ಕೆ ದೇಣಿಗೆ ರೂಪದಲ್ಲಿ ಅನ್ನಪ್ರಸಾದಕ್ಕೆ ಸಹಾಯ ಮಾಡಿದ್ದಾರೆ. ಅಂತಹ ದಂಪತಿಗಳ ಆದರ್ಶ ಪಡೆದುಕೊಳ್ಳಬೇಕೆಂದು ಖ್ಯಾತ ವೈದ್ಯರು ಶ್ರೀಕಾಂತ ಕನ್ನೂರೆ ಹೇಳಿದರು.
ಜಂಬಗಿ ಗ್ರಾಮದಲ್ಲಿ ಹನುಮಾನ ದೇವಸ್ಥಾನಕ್ಕೆ ಹನಮಾಪೂರ ಗ್ರಾಮದ ವಿಠ್ಠಲ ಮಳವಾಡ ದಂಪತಿಗಳು ಅನ್ನ ದಾಸೋಹಕ್ಕೆ ದೇಣಿಗೆ ನೀಡಿದ ನಂತರ ದೇವಸ್ಥಾನದ ಕಮೀಟಿ ವತಿಯಿಂದ ದಂಪತಿಗಳಿಗೆ ಸತ್ಕರಿಸಿ ಮಾತನಾಡಿ ಅವರು ಮನುಷ್ಯ ಹುಟ್ಟು ಖಚಿತ, ಸಾವು ನಿಶ್ಚಿತ ಇದ್ದು, ಇದರ ಮಧ್ಯ ನಾವು ಯಾವರೀತಿ ಕೆಲಸ ಮಾಡುತ್ತಿವೋ ಅದೇ ಶಾಶ್ವತ. ದುಡ್ಡು, ಹಣ, ಸಂಪತ್ತು ಶಾಶ್ವತ ಉಳಿಯುವುದಿಲ್ಲ. ಮನುಷ್ಯನು ಹುಟ್ಟಿದ ನಂತರ ಒಳ್ಳೆಯ ಕೆಲಸ ಮಾಡಬೇಕೆಂದು ಅವರು ಸಲಹೆ ನೀಡಿದರು.
ಈ ವೇಳೆ ಡಾ.ಶಶಿಧರ ಕುಂಬಾರ, ವಿಠ್ಠಲ ಕನ್ನೂರೆ, ಸುಭಾಷ ನಾಗನ್ನವರ, ಸಂಜಯ ಮಾಳಿ, ಪಿ.ಡಿ.ಓ ಸೋಮು ರಾಠೋಡ, ಪ್ರಶಾಂತ ವಾಘಮಾರೆ, ಪ್ರಕಾಶ ಪೂಜಾರಿ ಸೇರಿದಂತಗಣ್ಯರು ಉಪಸ್ಥಿತಿ ಇದ್ದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 