ಡಿಡಿಯಲ್ಲಿ ಶನಿವಾರದಿಂದ 'ರಾಮಾಯಣ' ಮರು ಪ್ರಸಾರ; ಜಾವಡೇಕರ್
ನವದೆಹಲಿ,
ಮಾ 27, ದೂರದರ್ಶನದಲ್ಲಿ ಶನಿವಾರದಿಂದ 'ರಾಮಾಯಣ' ಸರಣಿ ಮರು
ಪ್ರಸಾರಗೊಳ್ಳಲಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್
ಜಾವಡೇಕರ್ ಹೇಳಿದ್ದಾರೆ. ದಶಕಗಳ ಹಿಂದೆ ಅತ್ಯಂತ ಪ್ರಸಿದ್ಧಿ ಹೊಂದಿದ್ದ ಪೌರಾಣಿಕ
ಧಾರವಾಣಿ ರಾಮಾಯಣವನ್ನು ಮರು ಪ್ರಸಾರ ಮಾಡಲಾಗುವುದು. ಇದು ಬೆಳಗ್ಗೆ 9ರಿಂದ 10ರಿಂದ
ಒಂದು ಅಧ್ಯಾಯ ಹಾಗೂ ರಾತ್ರಿ 9ರಿಂದ 10ರವರೆಗೆ ಮರುಪ್ರಸಾರವಾಗಲಿದೆ ಎಂದು ಅವರು ಟ್ವೀಟ್
ಮೂಲಕ ತಿಳಿಸಿದ್ದಾರೆ. ರಾಮಾಯಣ ಧಾರವಾಹಿ ಸುಪ್ರಸಿದ್ಧವಾಗಿದ್ದು, ರಾಮ, ಹನುಮಂತ,
ಸೀತೆಯ ಪಾತ್ರ ನಿರ್ವಹಿಸಿದವರನ್ನು ಜನರು ನಿಜವಾದ ದೇವರೇ ಎಂದು ಪರಿಗಣಿಸುತ್ತಿದ್ದರು.
ವಿಶೇಷವಾಗಿ ಈ ಧಾರವಾಹಿಯನ್ನು ಬಾಲ್ಯದಲ್ಲಿ ನೋಡಿದವರು ಈಗ ಮತ್ತೊಮ್ಮೆ ಅದನ್ನು
ವೀಕ್ಷಿಸಬಹುದಾಗಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 