ನಕ್ಕು ನಕ್ಕು ನಕ್ಷತ್ರರಾಗಿ’ ವಿನೂತನ ಕಾರ್ಯಕ್ರಮ

ನಕ್ಕು ನಕ್ಕು ನಕ್ಷತ್ರರಾಗಿ’ ವಿನೂತನ ಕಾರ್ಯಕ್ರಮ  'Nakku Nakku Nakshatraragi' – An innovative program

ಬೆಳಗಾವಿ, ಸೆ. 8: ನಗರದ ಹಾಸ್ಯಕೂಟ ಹಾಗೂ ಕನ್ನಡ ಸಾಹಿತ್ಯ ಭವನ ವಿಶ್ವಸ್ಥ ಮಂಡಳಿಯ ವತಿಯಿಂದ ಸೆ. 12ರಂದು ಶನಿವಾರ ಸಂಜೆ 4.30ಕ್ಕೆ ಚೆನ್ನಮ್ಮ ವೃತ್ತದ ಬಳಿಯ ಕನ್ನಡ ಸಾಹಿತ್ಯ ಭವನದಲ್ಲಿ ‘ನಕ್ಕು ನಕ್ಕು ನಕ್ಷತ್ರರಾಗಿ’ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖ್ಯಾತ ವಾಗ್ಮಿಗಳಾದ ಡಾ. ಬಸವರಾಜ ಜಗಜಂಪಿ ಅವರು ವಹಿಸಲಿದ್ದಾರೆ. ಪ್ರಮುಖ ನಗೆಮಾತುಗಾರರಾಗಿ ಹೊಸಪೇಟೆಯ ಡಾ. ರಾಘವೇಂದ್ರ ಕಟ್ಟೀ ಅವರು ಆಗಮಿಸಲಿದ್ದಾರೆ.  

ಸ್ಟ್ಯಾಂಡ್‌ಅಪ್ ಕಾಮಿಡಿ ಕಲಾವಿದೆ ಕು. ನಿಖಿಲ ಮಾಶೆಟ್ಟಿ ಅವರು ತಮ್ಮ ಹಾಸ್ಯಮಾತುಗಳ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷರಾದ ಎನ್‌. ಬಿ. ದೇಶಪಾಂಡೆ ಅವರು ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿಕೊಂಡಿದ್ದಾರೆ. ಹಾಸ್ಯಕೂಟ ಸಂಚಾಲಕ ಗುಂಡೇನಟ್ಟಿ ಮಧುಕರ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ತಾನಾಜಿ ಪರಿಚಯ ಮಾಡಿಕೊಡಲಿದ್ದು, ಜಿ. ಎಸ್‌. ಸೋನಾರ ಅವರು ನಿರೂಪಿಸಲಿದ್ದಾರೆ.