ಸದ್ಗುರು ಸಿದ್ಧಾರೂಢ ಸ್ವಾಮಿಜಿಯವರ ಪ್ರತಿಮೆ ಪ್ರತಿಷ್ಠಾಪನೆ

ಹುಬ್ಬಳ್ಳಿ ಸಿದ್ದಾರೂಢ ಸ್ವಾಮೀಜಿ ರೈಲು ನಿಲ್ದಾಣದ ಪ್ರವೇಶ ದ್ವಾರದಲ್ಲಿ ಸದ್ಗುರು ಸಿದ್ಧಾರೂಢ ಸ್ವಾಮಿಜಿಯವರ ಅಮೃತ ಶಿಲಾ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. ಸದ್ಗುರು ಸಿದ್ಧಾರೂಢ ಸ್ವಾಮಿಜಿಯವರ ಭವ್ಯ ಹಾಗೂ ಸುಂದರ ಪ್ರತಿಮೆಯನ್ನು  ನೋಡಲು ತೆರಳಿದ್ದ ಬಸವ ಪರಿಸರ ಸಂರಕ್ಷಣಾ ಸಮಿತಿಯ ಸದಸ್ಯರು ಸಿದ್ಧಾರೂಢ ಸ್ವಾಮಿಜಿಯವರ ಪ್ರತಿಮೆ ಕಂಡು ಸಂತಸ ವ್ಯಕ್ತಪಡಿಸಿ, ಪ್ರತಿಮೆಗೆ ಶ್ರದ್ಧಾ, ಭಕ್ತಿಯಿಂದ ಗೌರವ ನಮನ ಸಲ್ಲಿಸಿದರು ಹಾಗೂ ದರ್ಶನ ಆಶೀರ್ವಾದ ಪಡೆದರು.