ಬೈಲೂರು ಗ್ರಾಮಸ್ಥರಿಂದ ವೈದ್ಯಾಧಿಕಾರಿಗಳಿಗೆ ಸನ್ಮಾನ

ಕಿತ್ತೂರು 01: ಸಮೀಪದ ಬೈಲೂರು ಗ್ರಾಮದಲ್ಲಿ ವಿಶ್ವ ವೈದ್ಯರ ದಿನಾಚರಣೆ ಪ್ರಯುಕ್ತ ಬೈಲೂರಿನಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯಾಧಿಕಾರಿಗಳನ್ನು ಗ್ರಾಮಸ್ಥರಿಂದ ಸನ್ಮಾನಿಸಿ ಅಭಿನಂದಿಸಲಾಯಿತು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಲಪ್ರಭಾ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಶಂಕರಗೌಡ ಪಾಟೀಲ ಮಾತನಾಡಿ ಗ್ರಾಮದಲ್ಲಿ ವೈದ್ಯಾಧಿಕಾರಿಗಳು ನಿಸ್ವಾರ್ಥ ಸೇವೆಯಿಂದ ಕಾರ್ಯನಿರ್ವಹಿಸುತ್ತಿದ್ದು, ಅವರ ಸೇವೆ ನಿಜಕ್ಕೂ ಶ್ಲಾಘನೀಯ. ಗ್ರಾಮದ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಸರಸ್ವತಿ ಮಾಗಿ, ಡಾ. ಶಿರಸಂಗಿ ಹಾಗೂ ಡಾ. ವಿಜಯ್ ಗೋಕಾವಿ ಇವರನ್ನು ಸತ್ಕರಿಸಲಾಯಿತು. 

ನಾಗೇಶ್ ಮರಿಯಪ್ಪಗೋಳ, ಸಂಗಮೇಶ ಹಿರೇಮಠ, ವಿಠ್ಠಲ  ಅಗಸಿಮನಿ, ಸುರೇಶ್ ಕುರಗುಂದ, ಜಗದೀಶ ಅಂಗಡಿ, ಈರ​‍್ಪ ಸಿಂದೊಳ್ಳಿ ಹಾಗೂ ವಿನೋದ್ ಕ್ಯಾಸಗೇರಿ ಸೇರಿದಂತೆ ಅಂಗನವಾಡಿ ಆಶಾ ಕಾರ್ಯಕರ್ತರು, ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು. ನಾಗೇಶ್ ಬೆಣ್ಣೆ ನಿರೂಪಿಸಿ ವಂದನಾರೆ​‍್ಣ ಸಲ್ಲಿಸಿದರು.