ಮತದಾನ ನ್ಯಾಯಬದ್ಧ ಹಕ್ಕು, ತಪ್ಪದೇ ಚಲಾಯಿಸಿ: ಸಿಡಿಪಿಓ ನಾಗರಾಜ

ಬಳ್ಳಾರಿ 26: ಮತ ಚಲಾವಣೆ ಮಾಡುವುದು ಸಂವಿಧಾನದ ನ್ಯಾಯಬದ್ಧ ಹಕ್ಕು ಆಗಿದ್ದು, ಪ್ರತಿಯೊಬ್ಬರೂ ಮೇ 07 ರಂದು ತಪ್ಪದೇ ಮತ ಚಲಾವಣೆ ಮಾಡಿ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾಗರಾಜ ಹೇಳಿದರು. 

ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಗುರುವಾರ ನಗರದ ವಿಮ್ಸ್‌ ವೃತ್ತದಿಂದ ಇಂದಿರಾ ನಗರದವರೆಗೆ ಮತದಾನ ಜಾಗೃತಿ ಅಂಗವಾಗಿ ಹಮ್ಮಿಕೊಂಡಿದ್ದ ಮತದಾನ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಸಾರ್ವಜನಿಕರು ಯಾವುದೇ ಆಮೀಷಕ್ಕೆ ಒಳಗಾಗದೆ ಮತದಾನ ಮಾಡಿ, ಸದೃಢ ದೇಶ ನಿರ್ಮಾಣಕ್ಕೆ ತಕ್ಕ ನಾಯಕರನ್ನು ನೀವೇ ಆಯ್ದುಕೊಳ್ಳಿ ಎಂದರು. 

ಈ ವೇಳೆ ನಾನು ಹೆಮ್ಮೆಯ ಮತದಾರ, ತಪ್ಪದೇ ಮತ ಚಲಾಯಿಸುವೆ ಎನ್ನುವ ಸೆಲ್ಪಿ ಬೂತ್ ತೆರೆಯಲಾಗಿತ್ತು. 

ಜಾಥಾದುದ್ದಕ್ಕೂ ಮಹಿಳೆಯರು, ಆಶಾ-ಕಾರ್ಯಕರ್ತೆಯರು ವಿವಿಧ ಘೋಷಣೆ ಕೂಗುತ್ತಾ ನಾಮಪಲಕ ಹಿಡಿದು ಸಾಗಿದರು. 

ಈ ಸಂಧರ್ಭದಲ್ಲಿ ಆಶಾ ಕಾರ್ಯಕರ್ತೆಯರು ಸೇರಿದಂತೆ ಮಹಿಳೆಯರು, ಸಾರ್ವಜನಿಕರು ಉಪಸ್ಥಿತರಿದ್ದರು.