ಟ್ರ್ಯಾಕ್ಟರ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ರಾಯಬಾಗ 05: ತಾಲೂಕಿನ ಬಾವನ ಸೌಂದತ್ತಿ ಗ್ರಾಮದಲ್ಲಿ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶನಿವಾರ ಸಾಯಂಕಾಲ ನಡೆದಿದೆ.   

ಬೈಕ ಸವಾರ ವಸಂತ ಬಾಬಾಸಾಹೇಬ ದೇಸಾಯಿ (64) ಸಾವನ್ನಪ್ಪಿದ ದುರ್ದೈವಿ. ಇತನು ತನ್ನ ಹೆಂಡತಿ ಮತ್ತು ಮೊಮ್ಮಗನ ಜೊತೆ ರಾಯಬಾಗದಿಂದ ಸ್ವ ಗ್ರಾಮ ಸೌಂದತ್ತಿ ಕಡೆಗೆ ಬೈಕ ಮೇಲೆ ಹೋಗುವ ವೇಳೆ ಚಿಂಚಲಿ ಕಡೆಗೆ ಹೊರಟಿದ್ದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದಾನೆ. ಬೈಕ ಮೇಲೆ ಇದ್ದ ಹೆಂಡತಿ ಮತ್ತು ಮೊಮ್ಮಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ.   

ಪ್ರಕರಣ ರಾಯಬಾಗ ಪೊಲೀಸ ಠಾಣೆಯಲ್ಲಿ ದಾಖಲಾಗಿದೆ.