ಸ್ವಾತಂತ್ರ್ಯಯೋಧರ ಹೋರಾಟ ಅವಿಸ್ಮರಣೀಯ : ಡಾ. ಹಿರೇಮಠ

ರಬಕವಿ-ಬನಹಟ್ಟಿ : ಭಾರತ ಮಾತೆಯನ್ನು ಬ್ರೀಟಿಷರಿಂದ ಬಂಧನ ಮುಕ್ತಗೊಳಿಸಳು ಹೋರಾಟ ನಡೆಸಿದ ಸ್ವಾತಂತ್ರಯೋಧರ ತ್ಯಾಗ ಬಲಿದಾನ ಅವಿಸ್ಮರಣಿಯವಾದುದು. ಸ್ವಾತಂತ್ರ್ಯ ಸಂಗ್ರಾಮದ ವೀರಯೋಧರ ಕೆಚ್ಚದೆಯ ಜೀವ ಸಂದೇಶ ಇಂದಿನ ಯುವಕರಿಗೆ ಮಾದರಿಯಾಗಿದೆ. ದೇಶ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರತಿಯೊಬ್ಬರನ್ನು ಸದಾ ಸ್ಮರಿಸಬೇಕೆಂದು ಬನಹಟ್ಟಿಯ ಹಿರಿಯ ವೈದ್ಯ ಡಾ. ಉಮಾಶಂಕರ ಸ್ವಾಮಿ ಹಿರೇಮಠ ಹೇಳಿದರು.

ಬನಹಟ್ಟಿ ಸ್ವಾಮಿ ಆಸ್ಪತ್ರೆಯ ಹತ್ತಿರದ ಪುಕಾಳೆ ಗಲ್ಲಿಯಲ್ಲಿ 76 ನೇ ಸ್ವಾತಂತ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಧ್ವಜಾರೋಹಣ ಕಾರ್ಯಕ್ರಮದಲ್ಲಿ ಹಿರಿಯ ಸಮಾಜ ಸೇವಕ ಶಿವಾನಂದ ಕೊಳಕಿ, ಪ್ರಕಾಶ ಬುರಡ, ಬಸವರಾಜ ಘಂಟಿ, ದಿಲೀಪ ಹೊನ್ನೋರೆ, ಮಲ್ಲಪ್ಪ ಹೂಲಿ, ಸುದೀಪ ಸದಲಗಿ ಸೇರಿದಂತೆ ಪುಕಾಳೆ ಗಲ್ಲಿಯ ನಾಗರಿಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು