ದರ ನಿಗದಿ ಮಾಡಬೇಕೆಂದು ಮುಂದುವರೆದ ಧರಣಿ ಸತ್ಯಾಗ್ರಹ
The ongoing sit-in and satyagraha demanding price fixing
ಯರಗಟ್ಟಿ, 07 : ಪ್ರತಿ ಟನ್ ಕಬ್ಬಿಗೆ ?3500 ದರ ನಿಗದಿ ಮಾಡಬೇಕೆಂದು ಒತ್ತಾಯಿಸಿ, ನಾನಾ ರೈತ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಕಬ್ಬು ಬೆಳೆಗಾರರು ಪಟ್ಟಣದ ಸಂಗೋಳ್ಳಿ ರಾಯಣ್ಣ ವೃತ್ತಿದಲ್ಲಿ 6ನೇ ದಿನದ ಧರಣಿ ಸತ್ಯಾಗ್ರಹ ಆರಂಭಿಸಿದರು. ಧರಣಿಯಲ್ಲಿ ರೈತರು ಭಜನೆ, ಡೊಳ್ಳು ನಾದ, ಪದಗೀತೆಗಳ ಮೂಲಕ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲೇ ಅಡುಗೆ ಮಾಡಿ ಊಟ ಮಾಡುವ ಮೂಲಕ ತಮ್ಮ ಹೋರಾಟವನ್ನು ಮುಂದುವರಿಸಿದರು.ಈ ವೇಳೆ ಮಹಾಂತೇಶ ತೋಟಗಿ, ಮಂಜುಳಾ ಅಕ್ಕಿ, ರಾಯಪ್ಪ ಕರಿಗಾರ, ರಂಗಪ್ಪ ಗಂಗರಡ್ಡಿ, ಯಮನಪ್ಪ ಮಾಳಗಿ, ಯಕ್ಕೇರೆಪ್ಪ ತಳವಾರ, ರಾಮಕೃಷ್ಣ ಎಳ್ಳಮ್ಮಿ, ಕೃಷ್ಣಾ ಚೌವರಡ್ಡಿ, ಗಿರೇಪ್ಪ ಗಂಗರೆಡ್ಡಿ, ಯಕ್ಕೇರೆಪ್ಪ ಮಾಳಗಿ, ಪುಟ್ಟು ಅರಳಿಕಟ್ಟಿ, ರಮೇಶ ಕಮಕೇರಿ, ಬಸಪ್ಪ ಅರಳಿಕಟ್ಟಿ, ರಮೇಶ ಬಾಲರೆಡ್ಡಿ ಸೇರಿದಂತೆ ಅನೇಕರು ರೈತ ಮುಖಂಡರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 