ರಾಜ್ಯದಲ್ಲಿ ಕೊರೊನವೈರಸ್ನ ದೃಢಪಟ್ಟ ಪ್ರಕರಣಗಳ ಸಂಖ್ಯೆ 247 ಕ್ಕೆ ಏರಿಕೆ
ಬೆಂಗಳೂರು,
ಏಪ್ರಿಲ್ 13, ಹೊಸದಾಗಿ 15 ಕೊವಿದ್-19 ಪ್ರಕರಣಗಳು
ವರದಿಯಾಗುವುದರೊಂದಿಗೆ ರಾಜ್ಯದಲ್ಲಿ ದೃಢಪಟ್ಟ ಪ್ರಕರಣಗಳ ಸಂಖ್ಯೆ ಸೋಮವಾರ ಇಲ್ಲಿ 247
ಕ್ಕೆ ಏರಿದೆ.ಅಧಿಕೃತ ಮೂಲಗಳ ಪ್ರಕಾರ, ಧಾರವಾಡದ ನಾಲ್ಕು ಪ್ರಕರಣಗಳನ್ನು
ಹೊರತುಪಡಿಸಿ, ಮಂಡ್ಯ ಜಿಲ್ಲೆಯ ಒಂದೇ ಕುಟುಂಬದಲ್ಲಿ ಮೂರು ಪ್ರಕರಣಗಳು, ಬೆಳಗಾವಿಯಲ್ಲಿ
ಮೂರು, ಬೀದರ್ ನಲ್ಲಿ 2 ಹಾಗೂ ಬಾಗಲಕೋಟೆ, ಬೆಂಗಳೂರು ನಗರ ಮತ್ತು ಗ್ರಾಮೀಣ
ಜಿಲ್ಲೆಯಿಂದ ತಲಾ ಒಂದು ಪ್ರಕರಣಗಳು ಹೊಸದಾಗಿ ವರದಿಯಾಗಿವೆ.15 ಹೊಸ ಪ್ರಕರಣಗಳಲ್ಲಿ
ಬೀದರ್, ಮಂಡ್ಯ ಮತ್ತು ಧಾರವಾಡ ಜಿಲ್ಲೆಗಳ ಐದು ಮಹಿಳಾ ರೋಗಿಗಳು ಸೇರಿದ್ದಾರೆ. ಸೋಂಕಿತ
ಎಲ್ಲ ರೋಗಿಗಳನ್ನು ನಿಗದಿಪಡಿಸಿದ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದ್ದು, ಅವರ ಆರೋಗ್ಯ
ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ.ರಾಜ್ಯದಲ್ಲಿ ಮಾರಕ ಸೋಂಕಿನಿಂದ ಆರು ಮಂದಿ ಬಲಿಯಾಗಿದ್ದರೆ, ಇತರ 59 ರೋಗಿಗಳು ಇದುವರೆಗೆ ಸಂಪೂರ್ಣ ಗುಣಮುಖರಾಗಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 