ಜಕಣಾಚಾರಿ ವೃತ್ತಕ್ಕೆ ತಹಸಿಲ್ದಾರ್ ಡಾ.ಹೂಗಾರ ಭೂಮಿಪೂಜೆ
Tahsildar Dr. Hugara performs Bhoomi Pooja for Jakanachari Circle
ತಾಳಿಕೋಟಿ 17: ವಿಶ್ವಕರ್ಮ ಅವರ ಜಯಂತಿ ಅಂಗವಾಗಿ ಪಟ್ಟಣದ ದೇವರ ಹಿಪ್ಪರಗಿ ರಸ್ತೆಯ ಜಾನಕಿ ಹಳ್ಳದ ಹತ್ತಿರ ಇರುವ ಅಮರಶಿಲ್ಪಿ ಜಕಣಾಚಾರಿ ವೃತ್ತಕ್ಕೆ ತಹಸಿಲ್ದಾರ್ ಡಾ.ವಿನಯಾ ಹೂಗಾರ ಅವರು ಬುಧವಾರ ಭೂಮಿ ಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಅವರು ವಿಶ್ವಕರ್ಮ ಸಮಾಜ ಕಲೆ ಮತ್ತು ವಾಸ್ತು ಶಿಲ್ಪ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದೆ ಈ ಸಮಾಜದ ವಿಶ್ವ ಶ್ರೇಷ್ಠ ಶಿಲ್ಪಿ ಜಕಣಾಚಾರಿ ಅವರ ವೃತ್ತಕ್ಕೆ ಭೂಮಿ ಪೂಜೆ ನೆರವೇರಿಸಿದ್ದು ಸಂತಸದ ವಿಷಯವಾಗಿದೆ ಎಂದರು.
ಭೂಮಿಪೂಜಾ ಸಮಾರಂಭದಲ್ಲಿ ಪುರಸಭೆ ಅಧ್ಯಕ್ಷೆ ಜುಬೇದಾ ಜಮಾದಾರ,ಪಿಎಸ್ಐ ಜ್ಯೋತಿ ಖೋತ್, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಕಾಶಿನಾಥ ಮುರಾಳ, ಸಹಕಾರಿ ಬ್ಯಾಂಕ್ ನಿರ್ದೇಶಕ ಎಂ.ಎಸ್.ಸರಶೆಟ್ಟಿ, ಪುರಸಭೆ ಸದಸ್ಯರಾದ ಮುತ್ತಪ್ಪ ಚಮಲಾಪೂರ, ಅಕ್ಕಮಹಾದೇವಿ ಕಟ್ಟಿಮನಿ, ವಾಸುದೇವ ಹೆಬಸೂರ, ಅಣ್ಣಪ್ಪ ಜಗತಾಪ,ಪರಶುರಾಮ ತಂಗಡಗಿ, ಮುದುಕಪ್ಪ ಬಡಿಗೇರ, ಪಿಕೆಪಿಎಸ್ ನಿರ್ದೇಶಕ ಗೋವಿಂದಸಿಂಗ್ ಮೂಲಿಮನಿ, ಮುಖಂಡ ಡಿ.ಕೆ.ಪಾಟೀಲ,ಸಜ್ಜನ ಸಮಾಜದ ಉಪಾಧ್ಯಕ್ಷ ತಿಪ್ಪಣ್ಣ ಸಜ್ಜನ,ವಿಶ್ವಕರ್ಮ ಸಮಾಜದ ಅಧ್ಯಕ್ಷ ಶ್ರೀನಿವಾಸ ಸೋನಾರ, ಉಪಾಧ್ಯಕ್ಷ ಪ್ರಭಾಕರ ಹಿಪ್ಪರಗಿ, ಖಜಾಂಚಿ ಶ್ರೀನಿವಾಸ ಪತ್ತಾರ, ದೇವೇಂದ್ರ್ಪ ಬಡಿಗೇರ, ಗಂಗಣ್ಣ ಬಡಿಗೇರ, ಸುನೀಲ ವರದಪ್ಪನವರ, ನಾಗರಾಜ ಪತ್ತಾರ, ಮಲ್ಲಿಕಾರ್ಜುನ ಬಡಿಗೇರ, ಹುಸೇನ ಜಮಾದಾರ, ತಾಲೂಕ ಕಾರ್ಯದರ್ಶಿ ಮಂಜುನಾಥ ಬಡಿಗೇರ, ಶಿಕ್ಷಕರಾದ ಜಿ.ಕೆ.ಪತ್ತಾರ,ಗಜಾನನ ಸೋನಾರ ಮತ್ತಿತರರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 