2026ನೇ ಸಾಲಿನ ಕಣವಿ ಕಾವ್ಯ ಪುರಸ್ಕಾರಕ್ಕೆ ಸುರೇಶ ತಂಗೋಡ ಆಯ್ಕೆ
Suresh Thangoda has been selected for Kanavi Kavya Puraskar for the year 2026
ಲಕ್ಷ್ಮೇಶ್ವರ " 23 : ಗದಗ ಕರ್ನಾಟಕ ವಿದ್ಯಾ ವರ್ಧಕ ಸಂಘ ಧಾರವಾಡ ಇವರು ನಾಡೋಜ ಡಾ ಚನ್ನವೀರ ಕಣವಿ ಮತ್ತು ಶಾಂತಾದೇವಿ ಕಣವಿಯವರ ದತ್ತಿ ಅಂಗವಾಗಿ ಪ್ರತಿ ವರ್ಷವೂ ಆಯೋಜಿಸುವ ರಾಜ್ಯ ಮಟ್ಟದ ಕಾವ್ಯ ಸ್ಪರ್ಧೆಯಲ್ಲಿ 2026ನೇ ಸಾಲಿನ ಕಾವ್ಯ ಪುರಸ್ಕಾರ ಸುರೇಶ ತಂಗೋಡ ಬರೆದಿರುವ “ಅವನಲ್ಲ ಅವಳು”ಕಾವ್ಯಕ್ಕೆ ಲಭಿಸಿರುವುದು ಎಂದು ಸ್ಪರ್ಧೆಯ ಆಯೋಜಕರಾದ ಮತ್ತು ಕ. ವಿ. ವ.ಸಂಘ ಧಾರವಾಡದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶಂಕರ ಹಲಗತ್ತಿ ಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸುತ ಕಾವ್ಯನಾಮದ ಮೂಲಕ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಸುರೇಶ ತಂಗೋಡ ಅವರು "ಕಾಂಕ್ರೀಟ್ ಕಾಡು","ಅಂಗೈಯಲ್ಲಿ ಅಂಚೆ" ಎಂಬ ಕೃತಿಗಳನ್ನು ನಾಡಿನ ಸಾರಸ್ವತ ಲೋಕಕ್ಕೆ ಅರ್ಿಸಿದ್ದು ಅವರ ತಮ್ಮದೇ ಓದುಗ ಬಳಗವನ್ನು ಹೊಂದಿದ್ದಾರೆ. ಪ್ರಸ್ತುತ ಲಕ್ಷ್ಮೇಶ್ವರ ಅಂಚೆ ಕಚೇರಿಯಲ್ಲಿ ಅಧಿಕಾರಿಯಾಗಿರುವ ಅವರಿಂದ ಇನ್ನೂ ಅನೇಕ ಕೃತಿಗಳು ಹೊರಹೊಮ್ಮಲಿ, ನಾಡಿನಾದ್ಯಂತ ಅವರ ಹೆಸರು ಚಿರಪರಿಚಿತವಾಗಲೆಂದು ಲಕ್ಷ್ಮೇಶ್ವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು,ಅವರ ಓದುಗ ವರ್ಗ ಮತ್ತು ಪತ್ರಿಕಾ ಬಾಂಧವರು ಅವರನ್ನು ಅಭಿನಂದಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 