ಕಬ್ಬು ಬೆಳೆ ಕ್ಷೇತ್ರ ವಿಸ್ತಾರದಿಂದ 2025-26 ಸಾಲಿನ ಕಬ್ಬು ಉತ್ಪಾದನೆ ಹೆಚ್ಚುವ ನೀರೀಕ್ಷೆ
Sugarcane production is expected to increase in 2025-26 due to expansion of sugarcane cultivation ar
ಕಬ್ಬು ಬೆಳೆ ಕ್ಷೇತ್ರ ವಿಸ್ತಾರದಿಂದ 2025-26 ಸಾಲಿನ ಕಬ್ಬು ಉತ್ಪಾದನೆ ಹೆಚ್ಚುವ ನೀರೀಕ್ಷೆ
ಮಾಂಜರಿ 21: ಕೆಳೆದ ಐದು ವರ್ಷಗಳಲ್ಲಿ ಕಬ್ಬು ಇಳುವರಿ ಚೆನ್ನಾಗಿ ಬರುತ್ತಿದ್ದು, ಕಬ್ಬು ಕ್ಷೇತ್ರ ಕ್ಷೇತ್ರ ಕೂಡ ವಿಸ್ತಾರವಾಗುತ್ತಿದೆ. ಇದರ ಪರಿಣಾಮವಾಗಿ 2025-26ನೇ ಸಾಲಿನಲ್ಲಿ ಉತ್ಪಾದನೆ ಹೆಚ್ಚಾಗುವ ನೀರೀಕ್ಷೆ ಇದೆ. ಉತ್ತರ್ರದೇಶದಲ್ಲಿ ಕ್ಷೇತ್ರ ಇಳಿಕೆಯಾಗಿದ್ದರೂ ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ತೃಪ್ತಿಕರವಾಗಿದೆ. ಈ ಹಿನ್ನೆಲೆಯಲ್ಲಿ ಸಕ್ಕರೆ ಉದ್ಯಮವು ಸರ್ಕಾರ ಸಮರ್ಕವಾದ ಸಕ್ಕರೆ ನೀತಿಯನ್ನು ರೂಪಿಸಬೇಕೆಂದು ಅಪೇಕ್ಷಿಸುತ್ತಿದೆ.
ಕಳೆದ ಐದು ವರ್ಷಗಳಲ್ಲಿ ಹೆಕ್ಟೇರ್ ಒಂದಕ್ಕೆ 85 ಟನ್ ಇಳುವರಿ ಬಂದಿದೆ. ಕಬ್ಬು ಬೆಳೆ ಕ್ಷೇತ್ರ 57.31 ಲಕ್ಷ ಹೆಕ್ಟೇರ್ಗೆ ವಿಸ್ತರಿಸಿದೆ. ಇದರಿಂದಾಗಿ 2025-26ನೇ ಸಾಲಿನಲ್ಲಿ ಉತ್ಪಾದನೆ ಸುಮಾರುಅಂದಾಜು 26.1 ದಶಲಕ್ಷ ಟನ್ ಸಕ್ಕರೆ ಉತ್ಪಾದಿಸಲಾಗಿದ್ದು, ಆಂತರಿಕ ಬಳಕೆ ಪ್ರಮಾಣ 28 ದಶಲಕ್ಷ ಟನ್ಗಿಂತ ಕಡಿಮೆ ಇದೆ. ಆದರೆ 2023-24ನೇ ಸಾಲಿನ ಹೆಚ್ಚುವರಿ ದಾಸ್ತಾನು ಹತ್ತಿರ 80 ಲಕ್ಷ ಟನ್ ಇರುವ ಕೊರತೆ ಉಂಟಾಗುವ ಸಾಧ್ಯತೆ ಇಲ್ಲ. ಎಲ್ಲಕ್ಕೂ ಮಿಗಿಲಾಗಿ 0.8 ದಶಲಕ್ಷ ಟನ್ ಪ್ರಮಾಣದ ಸಕ್ಕರೆಯನ್ನು ಭಾರತ ರಫ್ತು ಮಾಡುತ್ತಿದೆ. ಕೇಂದ್ರ ಕೃಷಿ ಸಚಿವಾಲಯವು ತಿಳಿಸಿದಂತೆ ಈ ವರ್ಷ ಕಬ್ಬು ಬೆಳೆ ಕ್ಷೇತ್ರ 57.31 ಲಕ್ಷ ಹೆಕ್ಟೇರ್ದಷ್ಟಾಗಿದ್ದು, ಕಳೆದ ವರ್ಷದಲ್ಲಾಗಿದ್ದ 55.68 ಲಕ್ಷ ಹೆಕ್ಟೇರ್ ಗಿಂತ ಶೇ.2.9ರಷ್ಟು ಹೆಚ್ಚಳವಾಗಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 