ಪಟ್ಟಣದಲ್ಲಿ ತಕ್ಷಣವೇ ಸರಕಾರಿ ಪದವಿ ಕಾಲೇಜು ಆರಂಭಿಸಿ: ಶಿವಾನಂದ ಯಡಳ್ಳಿ ಆಗ್ರಹ

ಪಟ್ಟಣದಲ್ಲಿ ತಕ್ಷಣವೇ ಸರಕಾರಿ ಪದವಿ ಕಾಲೇಜು ಆರಂಭಿಸಿ: ಶಿವಾನಂದ ಯಡಳ್ಳಿ ಆಗ್ರಹ Start a government degree college in the town immediately: Shivananda Yadalli demands

ಚಡಚಣ 21: 2026-27ನೇ ಸಾಲಿನ ಬಜೆಟ್ನಲ್ಲಿ ಪಟ್ಟಣಕ್ಕೆ ಸರಕಾರಿ ಪದವಿ ಕಾಲೇಜಿಗೆ ಅನುಮೋದನೆ ಪಡೆದಿದ್ದೇನೆ ಎಂದು ಹೇಳುವ ಶಾಸಕ ವಿಠ್ಠಲ ಕಟಕಧೋಂಡ ಅವರು ಈವರೆಗೂ ಪಟ್ಟಣದಲ್ಲಿ ಕಾಲೇಜು ಆರಂಭಿಸಿಲ್ಲ. ಕೂಡಲೇ ಆಗ್ರಹಿಸಿದರು.  ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.    ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಚಡಚಣದಲ್ಲಿ ಪದವಿ ಕಾಲೇಜು ಪ್ರಾರಂಭಿಸುವುದಾಗಿ ಈವರೆಗೂ ಇಂದಿನವರೆಗೆ ಪಟ್ಟಣದಲ್ಲಿ ಯಾವುದೇ ಸರಕಾರಿ ಕಾಲೇಜು ಪ್ರಾರಂಭವಾಗಿಲ್ಲ. ವಿಳಂಬ ನೀತಿಯನ್ನು ತೋರಿಸುತ್ತಿರುವ ಶಾಸಕರು ತಮ್ಮ ಇಚ್ಛಾಶಕ್ತಿಯ ಕೊರತೆಯಿಂದ ಖಾಸಗಿ ಶಿಕ್ಷಣ ಸಂಸ್ಥೆಗಳ ಹಿತ ಕಾಪಾಡುತ್ತಿದ್ದಾರೆ ಎಂದು ಅರೋಪಿಸಿದ ಅವರು, ಮೇ 26ರ ರಿಂದ ಎಲ್ಲ ಕಡೆ ಶಾಲಾ ಕಾಲೇಜುಗಳು ಪ್ರಾರಂಭವಾಗುತ್ತವೆ.

ಆದರೆ ಪಟ್ಟಣದಲ್ಲಿ ಮಂಜೂರಾಗಿರುವ ಕಾಲೇಜು ಮಾತ್ರ ಆರಂಭವಾಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ.  ಅಲ್ಲದೇ ಮಂಜೂರಾಗಿರುವ ಸರಕಾರಿ ಕಾಲೇಜಿಗೆ ಉಪನ್ಯಾಸಕರನ್ನು ಹಾಗೂ ಸಿಬ್ಬಂದಿಯನ್ನು ನಿಯೋಜನೆ ಮಾಡಿಲ್ಲ. ಬಹು ಮುಖ್ಯವಾಗಿ ಕಾಲೇಜು ಆರಂಭಕ್ಕೆ ಪಟ್ಟಣದಲ್ಲಿ ಸ್ಥಳವನ್ನು ಕೂಡಾ ಈವರೆಗೂ ಗುರುತಿಸದೇ ನಿಷ್ಕಾಳಜಿಯನ್ನು ತೋರುತ್ತಿದ್ದಾರೆ. ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ತಾಲೂಕು ಆಗಿರುವ ಈ ಭಾಗದ ಬಡ ವಿದ್ಯಾರ್ಥಿಗಳ ಹಿತ ಕಾಪಡಬೇಕಾದ ಶಾಸಕರು ಏಕೆ ಅವರನ್ನು ಕಡೆಗಣಿಸುತ್ತಿದ್ದಾರೆ ಎಂದು ಮೂಲಸೌಲಭ್ಯಗಳನ್ನು ಕಲ್ಪಿಸಿ ಕೂಡಲೇ ಕಾಲೇಜು ಆರಂಭಿಸಬೇಕು. ಇಲ್ಲದೇ ಹೋದರೆ  ನಮ್ಮ ಪಕ್ಷದಿಂದ ಶಾಸಕರ ಕಛೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.   ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ರಾಕೇಶ ಇಂಗಳಗಿ, ದುರ್ಗಪ್ಪ ಬೂದಿಹಾಳ, ನಗರ ಘಟಕ ಅಧ್ಯಕ್ಷ ಅಣ್ಣಪ್ಪ ಪೂಜಾರಿ, ಸದಸ್ಯರಾದ ನಾರಾಯಣ ನಾಯಕ, ಪೃಥ್ವಿ ಪೂಜಾರಿ ಸೇರಿದಂತೆ ಮತ್ತಿತರರು ಇದ್ದರು..