“ಕಪ್ಪಾದ ಆಕಾಶ ಬೆಳಗಾಯಿತಲೇ ಪರಾಕ್”
Sri Mylaralingeshwar Temple 59th Jatra Mahotsava
ಧಾರವಾಡ 24: 59ನೇ ಜಾತ್ರಾ ಮಹೋತ್ಸವ 24: ಇದೆ ಭಾನುವಾರ ಧಾರವಾಡದ ವಿದ್ಯಾಗಿರಿಯ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನ 59ನೇ ಜಾತ್ರಾ ಮಹೋತ್ಸವ ಹಾಗೂ ಕಾರ್ಣಿಕೋತ್ಸವ ಜರುಗಿತು. ಶ್ರೀ ಮೈಲಾರಲಿಂಗ ದೇವಸ್ಥಾನದ ವಂಶ ಪಾರಂಪರಿಕ ಕಾರ್ಣಿಕ ಪುರುಷ ಶ್ರೀ ಸಿರಿಮಲ್ಲ ತಿಪ್ಪಣ್ಣ ಶಿರೋಳ “ಕಪ್ಪಾದ ಆಕಾಶ ಬೆಳಗಾಯಿತಲೇ ಪರಾಕ್” ಎಂದು ಕಾರ್ಣಿಕ ನುಡಿದರು.
ಕಾರ್ಣಿಕದ ಅರ್ಥ : ದೇಶದ ಪ್ರಜೆ ಸಮೃದ್ಧಿ ಹೊಡುತ್ತಾನೆ ಮತ್ತು ರಾಜಕೀಯ ಬದಲಾವಣೆಗಳನ್ನು ಕಾಣಬಹುದು. ದೇಶ ಕಷ್ಟ ಕಾರ್ಪಣಯ ಗಳಿಂದ ಮುಕ್ತಿ ಹೊಂದಲಿದೆ. ಎರಡು ದಿನ ನಡೆದ ಈ ಜಾತ್ರಾ ಮಹೋತ್ಸವದಲ್ಲಿ ಮಹಾಭಿಷೇಕ, ಬಿಲ್ಲು ಪೂಜೆ, ರಾತ್ರಿ, ಭಜನೆ, ಜಾಗರಣೆ, ಪಲ್ಲಕ್ಕಿ ಉತ್ಸವ ,ಕಾರ್ಣಿಕ ಸೇವೆ, ಸರಪಳಿ ಸೇವೆ ಅತಿ ವಿಜೃಂಭಣೆಯಿಂದ ಜರುಗಿದವು ಎಂದು ಮಾಜಿ ಕಾರ್ಣಿಕ ಪುರುಷ ಅಜ್ಜ ತಿಪ್ಪಣ್ಣ ಸಂಗಪ್ಪ ಶಿರೋಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 