ಇಬ್ಬರು ಅಂಧರ ಬಾಳಿಗೆ ಬೆಳಕು ನೀಡಿದ ಸೋಮಶೇಖರಯ್ಯ
ಶೇಡಬಾಳ : ಶೇಡಬಾಳ ಪಟ್ಟಣದ ಸೋಮಶೇಕರಯ್ಯ ಪತ್ರಯ್ಯ ಹುದಲಿಮಠ ವಯಸ್ಸು 44 ಅನಾರೋಗ್ಯದಿಂದ ಮಂಗಳವಾರ ದಿ. 7 ರಂದು ನಿಧನರಾದರು. ಬೈಲಹೊಂಗಲದ ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟ ಮುಖಾಂತರ ಬೆಳಗಾವಿಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಗೆ ಮೃತರು ತಮ್ಮ ನೇತ್ರದಾನ ಮಾಡಿದ್ದಾರೆ.
ಮೃತರ ಕಣ್ಣುಗಳು ಮಣ್ಣಲ್ಲಿ ಮಣ್ಣಾಗಿ ಹೋಗುವುದಕ್ಕಿಂತ ಇಬ್ಬರು ಅಂಧರ ಬಾಳಿಗೆ ಬೇಳಕು ನೀಡಲು ಸಹಕರಿಸಿ ನೋವಿನಲ್ಲು ಕುಟುಂಬದ ಸದಸ್ಯರು ಮಾನವಿಯತೆ ಮೆರೆದಿದ್ದಾರೆ.
ಬೈಲಹೊಂಗಲದ ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟನ ಡಾ. ಮಹಾಂತೇಶ ರಾಮಣ್ಣವರ ಹಾಗೂ ಅಥಣಿಯ ವೈದ್ಯ ಡಾ. ಶಿವಕುಮಾರ ಕಲ್ಯಾಣಮಠ ಅವರ ನೇತೃತ್ವದಲ್ಲಿ ನೇತ್ರದಾನ ಪ್ರಕ್ರೀಯೆ ನೆರವೆರಿತು. ನೇತ್ರದಾನ ಮಾಡಿದ ಮೃತರು ತಂದೆ, ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ.
ದುಖ:ದ ಸಂದರ್ಭದಲ್ಲಯೂ ನೇತ್ರದಾನ ಮಾಡಿ ಮಾನವಿಯತೆ ಮೆರೆದ ಹುದಲಿಮಠ ಕುಟುಂಬದ ಎಲ್ಲ ಸದಸ್ಯರಿಗೆ ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟನ ಕಾರ್ಯದಶರ್ಿ ಡಾ. ಸುಶೀಲಾದೇವಿ ರಾಮಣ್ಣವರ ಕೃತಜ್ಞೆತೆ
ಸಲ್ಲಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 