ಶಿವಶರಣ ಅಲ್ಲಮ ಪ್ರಭು ಹೆಸರಿನಲ್ಲಿ ಪ್ರಾಧಿಕಾರ ರಚಿಸಲು ಸರ್ಕಾರಕ್ಕೆ ಒತ್ತಾಯ
ಬೆಂಗಳೂರು,
ಡಿ.28, ಶಿವಶರಣ ಅಲ್ಲಮಪ್ರಭು ದೇವರ ಪರಿಚಯ ಮತ್ತು ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕೆಂದು ಜೋಗ ಜಲಪಾತ
ಮಠದ ಡಾ.ವಿಜಯಕುಮಾರ ಸ್ವಾಮಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ
ಅವರು, 12 ಶತಮಾನದಲ್ಲಿ ಜನಿಸಿದ್ದ ಅಲ್ಲಮ ಪ್ರಭುಜಗತ್ತು ಕಂಡ ಮಹಾನ್ ತಪಸ್ವಿ, ದಿವ್ಯ ಯೋಗಿ, ಯುಗಾವತಾರಿ,
ಯೋಗದ ಮೂಲಕ ಎಲ್ಲ ಆರೋಗ್ಯದ ಸಮಸ್ಯೆಗಳನ್ನು ಗುಣಪಡಿಸುವ ಚಿಕಿತ್ಸಕರಾಗಿದ್ದರು. ಅವರು ಕನ್ನಡ ಸಾಹಿತ್ಯದಲ್ಲಿ
ವಚನ ಸಾಹಿತ್ಯ ಸ್ಥಾಪಕಾರಾಗಿದ್ದು, ಆಧುನಿಕ ಕವಿಗಳಾದ ಎಂ.ಗೋಪಾಲಕೃಷ್ಣ ಆಡಿಗ, ದ.ರಾಬೇಂದ್ರೆ, ಯು.ಆರ್.ಅನಂತಮೂರ್ತಿ,
ದೇವನೂರು ಮಹಾದೇವ ಮುಂತಾದ ಸಾಹಿತಿಗಳು ಅಲ್ಲಮ ಪ್ರಭುಗಳ ಪ್ರಭಾವಕ್ಕೆ ಒಳಗಾಗಿದ್ದರು ಎಂದರು.ಅಂದು
ಉತ್ತರ ಕರ್ನಾಟಕದ ಕೆಲ ಊರುಗಳಲ್ಲಿ ನಡೆಯುತ್ತಿದ್ದ ಅಲ್ಲಮಪ್ರಭು ಜಾತ್ರೆಯಲ್ಲಿ ಶಿಶುನಾಳ ಶರೀಫರು,
ನಾಗಲಿಂಗ ಅಜ್ಜ, ಕಳಕೋಳದ ಮಡಿವಾಳಪ್ಪ ಮುಂತಾದವರು ಪ್ರಭುಗಳವಚನಗಳನ್ನು ಹಾಡಿಹೊಗಳಿರುವ ದಾಖಲೆಗಳಿದ್ದು,
ಪ್ರಭುಗಳು ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಇಂತಹ ಮಹಾನ್ ಪುರುಷರ ಹೆಸರಿನಲ್ಲಿ ಅಭಿವೃದ್ಧಿ
ಪ್ರಾಧಿಕಾರ ರಚಿಸಬೇಕೆಂದುಸರ್ಕಾರವನ್ನು ಒತ್ತಾಯಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 