ಶಿವಳ್ಳಿ ಅಗಲಿಕೆ ಅನಾಥ ಪ್ರಜ್ಞೆ ಮೂಡಿಸಿದೆ: ಪ್ರೊ ಸನದಿ
ಹುಬ್ಬಳ್ಳಿ23: ಅಸಹಾಯಕರ ಆಸರೆ, ದೀನ ದಲಿತರ ಬಂಧು ಸಿ.ಎಸ್. ಶಿವಳ್ಳಿಯವರ ನಿಧನದಿಂದ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ಹಾನಿಯಾಗಿದೆ. ಅವರ ಅಕಾಲಿಕ ಅಗಲಿಕೆ ಅವರ ಸ್ನೆಹಿತರಿಗೆ, ಬೆಂಬಲಿಗರಲ್ಲಿ ಒಂದು ರೀತಿಯ ಅನಾಥ ಪ್ರಜ್ಙೆ ಮೂಡಿಸಿದೆ, ಎಂದು ಮಾಜಿ ಸಂಸದ ಪ್ರೊ ಐ. ಜಿ. ಸನದಿ ತಿಳಿಸಿದ್ದಾರೆ.
ಇಂದಿಲ್ಲಿ ಪತ್ರಿಕಾ ಹೇಳಿಕೆಯೊಂದನ್ನು ನೀಡಿರುವ ಅವರು, ದಶಕಗಳ ಕಾಲ ತಮಗೆ ಆತ್ಮೀಯ ಸ್ನೆಹಿತರಾಗಿದ್ದ ಶಿವಳ್ಳಿ, ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಲು ಶ್ರಮಿಸಿದ್ದರು. ಯಥಾರ್ಥ ವ್ಯೆಕ್ತಿತ್ವದ ಅವರು, ಸಹಾಯ ಕೇಳಿ ಬಂದ ಯಾರನ್ನೂ ನಿರಾಸೆಗೊಳಸಿತ್ತಿರಲಿಲ್ಲ. ಅದೇ ಅವರನ್ನು ಜನಪ್ರಿಯ ರಾಜಕಾರಣಿಯನ್ನಾಗಿ ಬೆಳೆಯಲು, 'ಬಡವರ ಬಂಧು' ಎನ್ನುವ ವಿಶೇಷಣ ಗಳಿಸಲು ಕಾರಣವಾಗಿತ್ತು, ಎಂದು ಪ್ರೊ ಸನದಿ ನುಡಿದಿದ್ದಾರೆ.
ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗದವರಿಗೆ, ಹಾಗು ಬೆಂಬಲಿಗರಿಗೆ ಆ ದೇವರು ನೀಡಲಿಯೆಂದು ಪ್ರಾಥರ್ಿಸುತ್ತೇನೆ ಎಂದು ಅವರು ನುಡಿದಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 