ಮುಂಡಗೋಡ ನೂತನ ತಹಶೀಲ್ದಾರರಾಗಿ ಎಸ್.ಎ. ಪ್ರಸಾದ್ ಅಧಿಕಾರ ಸ್ವೀಕಾರ
S.A. Prasad assumes office as the new Tahsildar of Mundagoda
ಲೋಕದರ್ಶನ ವರದಿ
ಮುಂಡಗೋಡ 09: ಉಡುಪಿಯ ಜಿಲ್ಲೆಯ ಹೆಬ್ರಿ ತಾಲೂಕಿನಿಂದ ವರ್ಗಾವಣೆಯಾಗಿ ಮುಂಡಗೋಡಗೆ ಬಂದಂತಹ ತಹಶೀಲ್ದಾರ ಎಸ್.ಎ. ಪ್ರಸಾದ ರವರು ಸೋಮವಾರ ತಹಶೀಲ್ದಾರ ಕಚೇರಿಗೆ ಆಗಮಿಸಿ ತಹಶೀಲ್ದಾರರಾಗಿ ಅಧಿಕಾರ ವಹಿಸಿಕೊಂಡರು. ತಹಶೀಲ್ದಾರರು ಅಧಿಕಾರ ವಹಿಸಿಕೊಂಡಾಗ ರಾಜ್ಯ ಅನ್ನದಾತ ಸಂಘ ಹಾಗೂ ಹಸಿರು ಸೇನೆ ಯ ಪದಾಧಿಕಾರಿಗಳು ಗೌರವಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ ಎಸ್.ಎ.ಪ್ರಸಾದರು ಮಾತನಾಡಿ ರೈತರ ಕೆಲಸ ಕಾರ್ಯಗಳಿಗೆ ಸ್ಪಂದಿಸುವುದಾಗಿ ತಿಳಿಸಿದರು. ಹೊಸ ತಹಶೀಲ್ದಾರರು ಜನರ ಜೊತೆ ಬೆರತು ಮುಕ್ತವಾಗಿ ಮಾತನಾಡಿದ್ದು ರಾಜ್ಯ ಅನ್ನದಾತ ಸಂಘ ಹಾಗೂ ಹಸಿರು ಸೇನೆ ಯ ಪದಾಧಿಕಾರಿಗಳು ಸಂತೋಷ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಚಿದಾನಂದ ಹರಿಜನ , ಜಿಲ್ಲಾಧ್ಯಕ್ಷ ಸೋಮಲಿಂಗ ಬೆಣ್ಣಿ, ಭೀಮಸಿ ವಾಲ್ಮೀಕಿ, ಎಸ್.ಎಸ್.ಪಾಟೀಲ, ಗೋವಿಂದ ಬೆಂಡ್ಲಗಟ್ಟಿ, ಮಾರ್ಟಿನ ಬಳ್ಳಾರಿ, ಜೈತುನಬಿ, ಪ್ರಶಾಂತ ಕರಿಗಾರ, ಬಸವರಾಜ ವಾಲ್ಮಿಕಿ, ಜೀವಣ್ಣ ನಾಣಾಪುರ, ಸೀತಾ ಸಿದ್ದಿ, ಯಲ್ಲವ್ವಾ ಭೋವಿ, ಮಿನಿನ್ ಸಿದ್ದಿ, ಸುದಾ ಸಿದ್ದಿ ನವಲು ಎಡಗೆ ನಾಗವೇಣಿ ಸಿದ್ದಿ ಮುಂತಾದವರು ಇದ್ದರು.
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ 