ರಸ್ತೆ ಹೆದ್ದಾರಿ: ಅಕ್ರಮ ವ್ಯಾಪಾರ ವಹಿವಾಟು
ಗ್ರಾಮದ ಮುಖ್ಯ ರಸ್ತೆಯಲ್ಲಿ ಗೂಡ ಅಂಗಡಿಗಳು ಹಾಕಿದ್ದರಿಂದ ಸರಕಾರಿ ವಾಹನಗಳು ಹಾಗೂ ಖಾಸಗಿ ವಾಹನಗಳು ಹೊರಳಲು ಬರದೆ ಇರುವದ
ತಾಂಬಾ 10: ಗ್ರಾಮದಿಂದ ಇಂಡಿ ದೇವರಹಿಪರಗಿ ಹೋಗುವ ರಸ್ತೆಯಲ್ಲಿ ಸಂಚರಿಸುವದು ದುಸ್ಥರವಾಗಿದೆ. ವಿಜಯಪೂರಕ್ಕೆ ಹೊಗುವ ತಿರುವಿನಲ್ಲಿ ಸರಕಾರಿ ಬಸ್ಸುಗಳೂ ಹೊರಳಲೂ ಬಾರದಂತ್ತಾಗಿದೆ.
ಈ ಮುಖ್ಯ ರಸ್ತೆಯನ್ನು ಕೆಲವರು ಅತಿಕ್ರಮಿಸಿ ವ್ಯಾಪಾರ ವಹಿವಾಟು ನಡೆಸುತ್ತಿರುವದರಿಂದ ಸಂಚಾರ ದುಸ್ಥರವಾಗಿದೆ ಎಂಬ ದೂರಗಳಿವೆ ಜನತೆಗೆ ಸಾರಿಗೆ ನಿಯಮ ಪಾಲಿಸದ ಖಾಸಗಿ ವಾಹನಗಳು ಎಲ್ಲಿಂದರಲ್ಲಿ ನಿಲ್ಲುತ್ತಿರುವದರಿಂದ ಸಂಚಾರ ವ್ಯವಸ್ಥೆಯನ್ನು ಮತ್ತಷ್ಟು ಹದ ಗೆಡೆಸಿದೆ. ಗ್ರಾಮದಲ್ಲೆ ಪೊಲೀಸ್ ಚೌಕಿ ಇದ್ದರು. ಈ ವ್ಯೆವಸ್ಥೆ ಸುದಾರಣೆಗೆ ಕ್ರಮ ಕೈಗೊಂಡಿಲ್ಲ ಎಂದು ಪ್ರಯಾಣಿಕರು ದೂರಿದ್ದಾರೆ. ಈ ಹಿಂದೆ ಗ್ರಾ.ಪಂ ಅಧ್ಯಕ್ಷರು ಹಾಗೂ ಊರಿನ ಹಿರಿಯರು ರಸ್ತೆ ಬದಿಯಲ್ಲಿ ಹಾಕಲಾದ ಕೇಲ ಅಂಗಡಿಗಳನ್ನು ತೆರವುಗೊಳಿಸಿದರು. ರಸ್ತೆ ಪಕ್ಕದಲ್ಲಿರುವ ಚರಂಡಿ ದಾಟಿ ಅಂಗಡಿಯನ್ನು ಇಡಬಾರದು ಎಂದು ಸೂಚಿಸಲಾಗಿತ್ತು. ನಂತರ ಚರಂಡಿಯನ್ನು ಸ್ವಚ್ಛ ಮಾಡಿ ಚರಂಡಿ ಮೇಲೆ ಇದ್ದ ಎಲ್ಲ ಅಂಗಡಿಗಳನ್ನು ತೆರವುಗೊಳಿಸಲಾಗಿತ್ತು.
ಇನ್ನೆನೂ ಸಂಚಾರ ಸುಗಮವಾಯಿತು ಎಂದುಕೊಂಡಿದ್ದರು.ಆದರೆ ಮತ್ತೆ ಖಾಸಗಿ ವಾಹನಗಳು ಮುಖ್ಯ ರಸ್ತೆಯ ಮೇಲೆ ನಿಲ್ಲುವದು ಅಲ್ಲದೆ ಗೂಡ ಅಂಗಡಿಗಳನ್ನು ರಸ್ತೆಯ ಮೇಲೆ ಆರಂಭಿಸಿರುವದರಿಂದ ಸಂಚಾರ ಕಷ್ಟವಾಗಿದೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೆ ಸುಗಮ ಸಂಚಾರಕ್ಕೆ ಅನೂಕೂಲ ಕಲ್ಪಿಸಬೇಕು ಹಾಗೂ ಇಲ್ಲಿ ಅತಿ ಕ್ರಮಣವಾಗಿ ಚರಂಡಿ ದಾಟಿ ಬಂದ ಅಂಗಡಿಗಳನ್ನು ತೆರವುಗೊಳಿಸಬೇಕು ಮತ್ತು ಖಾಸಗಿ ವಾಹನಗಳು ರಸ್ತೆಯ ಬದಿಯಲ್ಲಿ ನಿಲ್ಲದ ಹಾಗೆ ವ್ಯವಸ್ಥೆ ಮಾಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳು ಕೂಡಲೆ ಸುಗಮ ಸಂಚಾರಕ್ಕೆ ಅನೂಕೂಲ ಕಲ್ಪಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು
ಬೆಳಗಾವಿಯ ಜಿಮಖಾನಾ ಕ್ಲಬ್ನಲ್ಲಿ ಗುಂಡಿನ ದಾಳಿ; ವ್ಯಕ್ತಿ ಅದೃಷ್ಟವಶಾತ್ ಪಾರು
ವಾರಾಣಸಿಯ 27 ವರ್ಷದ ಯುವಕನಿಗೆ ಕೋವಿಡ್-19 ದೃಢ; ಬಿಎಚ್ಯು ಆಸ್ಪತ್ರೆಗೆ ದಾಖಲಾತಿ 