ಅಪಾಯಕಾರಿ ವೀಲಿಂಗ್ನಲ್ಲಿ ತೊಡಗಿದ ಯುವಕರ ಹೆಡೆಮುರಿ ಕಟ್ಟಿದ ಪೊಲೀಸರು
Police arrest youths involved in dangerous wheeling

ಯರಗಟ್ಟಿ 08: ಸಾಮಾಜಿಕ ಜಾಲತಾಣಲ್ಲಿ ರೀಲ್ಸ್ಮಾಡುವ ಚಟಕ್ಕಾಗಿ ನಾಲ್ಕಾರು ವಾಹನ ಹತ್ತಿ ಸಿನೆಮಾ ಸ್ಟೈಲ್ನಲ್ಲಿ ವೀಲಿಂಗ್ ಮಾಡಲು ಹೊರಟವರ ಹೆಡೆಮುರಿ ಕಟ್ಟುವಲ್ಲಿ ಮುರಗೋಡ ಪೊಲೀಸರು ಯಶಸ್ವಿಯಾಗಿದ್ದಾರೆ.
ಮುರುಗೋಡು ಪೊಲೀಸ್ ಠಾಣೆ ವ್ಯಾಪ್ತಿಯ ನುಗ್ಗನಟ್ಟಿ ಕ್ರಾಸ್ ಬಳಿಯ ರಾಜ್ಯ ಹೆದ್ದಾರಿ-20 ರಲ್ಲಿ ಅಪಾಯಕಾರಿ ವೀಲಿಂಗ್ನಲ್ಲಿ ತೊಡಗಿರುವ ವಾಹನ ಸವಾರರ ವಿರುದ್ಧ ಮುರುಗೋಡು ಪೊಲೀಸರು ಪ್ರಕರಣಗಳನ್ನು ದಾಖಲಿಸಿದ್ದಾರೆ.ಪೊಲೀಸರ ಪ್ರಕಾರ, ಫೆಬ್ರವರಿ 2, 2026 ರಂದು, ಮೂರು ಜೀಪ್ಗಳು ಮತ್ತು ಏಳು ಮೋಟಾರ್ಸೈಕಲ್ಗಳ ವೀಲ್ಡಿಂಗ್ ತೋರಿಸುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ್ದರು.ಇದರ ಮೇಲೆ ಕ್ರಮ ಕೈಗೊಂಡ ಮುರುಗೋಡು ಪೊಲೀಸರು ಏಳು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ ಆರು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಮಹೀಂದ್ರಾ ಓಪನ್ ಜೀಪ್, ಮಹೀಂದ್ರಾ ಸ್ಕಾರ್ಿಯೋ ಹಾಗೂ ಮಹೀಂದ್ರಾ ಬುಲೋರೋ ಜೊತೆಗೆ ಮೂರು ಬಜಾಜ್ ಪಲ್ಸರ್ ಮೋಟಾರ್ಸೈಕಲ್ಗಳು ಮತ್ತು ಒಂದು ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ವಶಕ್ಕೆ ಪಡೆದಿದ್ದಾರೆ.ಪೊಲೀಸರ ಕಣ್ಣಾವಲಿನಲ್ಲಿ ರೌಡೀಶೀಟರ್ ಆಗಿರುವ ಯರಗಟ್ಟಿ ಪಟ್ಟಣದ ನಿವಾಸಿ ಸುರೇಶ ಗುರುನಾಥ ಭಜಂತ್ರಿ ಅವರ ಪ್ರಚೋದನೆಯ ಮೇರೆಗೆ ವೀಲ್ಡಿಂಗ್ ನಡೆಸಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ತನ್ನ ಹುಟ್ಟುಹಬ್ಬವನ್ನು ಆಚರಿಸಲು ಈ ಸಾಹಸವನ್ನು ಪ್ರದರ್ಶಿಸಲಾಗಿದ್ದು, ಸವಾರರು ಈ ಕೃತ್ಯ ಎಸಗುವಂತೆ ಅವರು ಪ್ರೋತ್ಸಾಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆಯ ಸಮಯದಲ್ಲಿ ಸ್ಥಳದಲ್ಲಿದ್ದ ಸುರೇಶ್ ಗುರುನಾಥ್ ಭಜಂತ್ರಿ ವಿರುದ್ಧವೂ ಪ್ರತ್ಯೇಕವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಈ ವೇಳೆ ಸಿಪಿಐ ಆಯ್ ಎಂ ಮಠಪತಿ, ಪಿಎಸ್ಐಗಳಾದ ಬ್ಲೂ. ಎಚ್. ಯಾದವಾಡ, ಎಲ್. ಡಿ. ಮಾಳಿ, ಎಎಸ್ಐ ವಾಯ್. ಎಂ. ಕಡಕೋಳ, ಸಿಬ್ಬಂದಿ ವರ್ಗದವರಾದ ಎಸ್. ಎಂ. ಜೈನರ, ಎಂ. ಬಿ. ಸಣ್ಣನಾಯ್ಕರ, ಆರ್. ಬಿ. ಸಸಾಲಟ್ಟಿ, ಎಸ್. ಎಮ್. ಜವಲಿ, ವಾಯ್. ಎಸ್. ಯರಗಟ್ಟಿಮಠ, ಎಸ್. ಎನ್. ಹುಂಬಿ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 