ಶಿಂದಿಕುರಬೇಟ ಗ್ರಾಮದಲ್ಲಿ ಪಾಂಡುರಂಗ ಸಪ್ತಾಹ ಪ್ರಾರಂಭ
Pandurang Saptah begins in Shindikurabeta village
ಲೋಕದರ್ಶನ ವರದಿ
ಗೋಕಾಕ 29: ತಾಲೂಕಿನ ಶಿಂದಿಕುರಬೇಟ ಗ್ರಾಮದಲ್ಲಿ 21ನೇ ವರ್ಷದ ಅಂಗವಾಗಿ ಶ್ರೀ ಶ್ರೇಷ್ಠ ಜ್ಞಾನೇಶ್ವರಿ ಪಾರಾಯಣ ಅಖಂಡ ಹರಿನಾಮ ಸೋಹಳಾ ಹಾಗೂ ಶ್ರೀ ವಿಠ್ಠಲ ರುಕ್ಮಿಣಿ ಸಪ್ತಾಹವು ದಿ.29ರಿಂದ 31ರವರೆಗೆ ಅತೀ ವಿಜೃಂಭಣೆಯಿಂದ ಜರುಗಲಿದೆ.ದಿ.29 ಮತ್ತು 30ರಂದು ಮುಂಜಾನೆ ಕಾಕಡಾರತಿ ಹಾಗೂ ಪೋಥೀ ವಾಚನ, ರಾಮಜಪ,ಹರಿಪಾಠ,ಕೀರ್ತನ ಜರುಗಲಿದೆ.ದಿ.31ರಂದು ಮುಂಜಾನೆ ಕಾಕಡಾರತಿ ನಂತರ ಶ್ರೀ ಜ್ಞಾನೇಶ್ವರಿ ಪಾರಾಯಣ ಸಮಾಪ್ತಿ,ದಿಂಡಿ ಸೋಹಳಾ, ಸುಮಂಗಲೆಯರ ಆರತಿಯೊಂದಿಗೆ ಶ್ರೀ ಪಾಂಡುರಂಗ ವಿಠ್ಠಲ ರುಕ್ಮಿಣಿಯರ ಪಲ್ಲಕ್ಕಿ ಉತ್ಸವ ನಂತರ ಮಧ್ಯಾಹ್ನ ಮಹಾಪ್ರಸಾದ ಜರುಗಲಿದೆ. ಘಟಪ್ರಭಾದ ಮಾರುತಿ ವಂಜೇರಿ ಇವರು ಪಾರಾಯಣ ನಡೆಸಿಕೊಡುವರು.ಶ್ರೀ ಬಾಳು ಮಹಾರಾಜ ಭೋಸಲೆ ಮತ್ತು ಮಾಣಿಕ್ ಬೀಸೆ ಇವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಸಪ್ತಾಹ ಕಮೀಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 