ಪಂಚಮಸಾಲಿ ಸಮಾಜದ ಪ್ರತಿಭಾ ಪುರಸ್ಕಾರ, ಅರ್ಜಿಗೆ ಇಂದು ಕೊನೆ ದಿನ

ಹಗರಿಬೊಮ್ಮನಹಳ್ಳಿ.ಮೇ.24 : ತಾಲೂಕಿನ ಪಂಚಮಸಾಲಿ ತಾಲೂಕು ಘಟಕದ ವತಿಯಿಂದ ಸಮಾಜದ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇಕಡಾ 90ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಪಂಚಮಸಾಲಿ ಭವನದ ಕಚೇರಿಗೆ ಮೇ 25 ರೊಳಗೆ (ಗುರುವಾರ) ಅರ್ಜಿಗಳನ್ನು ತಲುಪಿಸುವಂತೆ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೊನ್ನದ ಗುರುಬಸವರಾಜ ತಿಳಿಸಿದ್ದಾರೆ. 

ಅರ್ಜಿಯ ಜೊತೆ ಅಂಕಪಟ್ಟಿ, ಆಧಾರ್ ಕಾರ್ಡ್‌, ಜಾತಿ ಪ್ರಮಾಣ ಪತ್ರ ಲಗತ್ತಿಸಿ ಇದೇ ಗುರುವಾರದೊಳಗೆ (ಇಂದು ಕೊನೆ ದಿನ) ಕಚೇರಿಗೆ ನೀಡುವಂತೆ ತಿಳಿಸಿದ್ದಾರೆ. ಮೇ 28 ರಂದು ಪಟ್ಟಣದ ಪಂಚಮಸಾಲಿ ಭವನದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರ ನಡೆಯಲಿದೆ ಎಂದು ಅವರು ತಿಳಿಸಿದರು.