ಕಾರವಾರ ಜಿಲ್ಲಾ ನ್ಯಾಯಾಲಯದಿಂದ ಆದೇಶ : ಲಂಚಪಡೆದವರಿಗೆ ಜಾಮೀನು ಇಲ್ಲ
Order from Karwar District Court: No bail for those who took bribes
ಕಾರವಾರ 25: ಮೂರು ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ಬಂಧಿತರಾದ ಶಿರಸಿ ನಗರಸಭೆಯ ಕಂದಾಯ ನೀರೀಕ್ಷಕ ರಾಮಚಂದ್ರ ವರ್ಣೇಕರ್, ಮತ್ತು ಬಿಜೆಪಿ ಸದಸ್ಯ ಗಣಪತಿ ನಾಯ್ಕ ರ ಜಾಮೀನು ಅರ್ಜಿಗಳನ್ನು ಗೌರವಾನ್ವಿತ ಸೆಷನ್ಸ್ ಮತ್ತು ವಿಶೇಷ ನ್ಯಾಯಾಧೀಶರಾದ ಡಿ.ಎಸ್.ವಿಜಯಕುಮಾರ್ ತಿರಸ್ಕರಿಸಿದ್ದಾರೆ.
ಗಣಪತಿ ಹಾಗೂ ರಾಮಚಂದ್ರ ಜಾಮೀನಿಗಾಗಿ ತಮ್ಮ ವಕೀಲರ ಮೂಲಕ ಅರ್ಜಿ ಹಾಕಿದ್ದರು. ಲೋಕಾಯುಕ್ತರ ಪರ ಕಾರವಾರದ ವಕೀಲರಾದ ಎಲ್.ಎಂ.ಪ್ರಭು ವಾದಿಸಿದ್ದರು. ಜಮೀನು ನೀಡದಂತೆ ವಾದಿಸಿದ್ದರು . ಇಬ್ಬರು ಪ್ರಭಾವಿಗಳಾಗಿದ್ದು, ಸಾಕ್ಷಿನಾಶ ಹಾಗೂ ಬೆದರಿಕೆಯ ಸಾಧ್ಯತೆಗಳನ್ನು ನ್ಯಾಯಾಧೀಶರಿಗೆ ಮನವರಿಕೆ ಮಾಡಿದ್ದರು . ವಾರದ ಹಿಂದೆ ಶಿರಸಿಯಲ್ಲಿ ನಡೆದ ಲೋಕಾಯುಕ್ತರ ದಾಳಿಯಲ್ಲಿ ಆರೋಪಿಗಳು ಕಾರ್ ನಲ್ಲಿ ಕುಳಿತು ಮೂರು ಲಕ್ಷ ರೂ.ಲಂಚ ಪಡೆಯುವಾಗ, ಲೋಕಾಯುಕ್ತರ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದರು . ನಾಗರಿಕ ರಮೇಶ್ ಹೆಗಡೆ ಎಂಬುವವರ ಲೀಜ್ ಆಸ್ತಿಯ ಬಗ್ಗೆ ತಕರಾರು ಇದೆ. ಅದನ್ನು ಸರಿಪಡಿಸುವುದಾಗಿ ಹೇಳಿ, ಹಣದ ಬೇಡಿಕೆ ಇಟ್ಟಿದ್ದರು. ರಮೇಶ್ ಹೆಗಡೆ ನಗರಸಭೆಯ ನೋಟೀಸ್ ಗಳ ವಿರುದ್ಧ ಕೋರ್ಟಗೆ ಹೋಗಿ ತಡೆಯಾಜ್ಞೆ ತಂದಿದ್ದರು. ಆದರೂ ಸಹ ನಗರಸಭೆಯ ಕಂದಾಯ ಅಧಿಕಾರಿ ರಾಮಚಂದ್ರ , ಸದಸ್ಯ ಗಣಪತಿ ,ಜಂಟಿಯಾಗಿ ರಮೇಶ್ ಹೆಗಡೆಗೆ ನೋಟೀಸ್ ನೀಡಿ,ಭಯ ಹುಟ್ಟಿಸಿ, ಹಣ ಕೀಳಲು ಯತ್ನ ನಡೆಸಿದ್ದರು .
ಈ ಸಂಬಂಧ ರಮೇಶ್ ಹೆಗಡೆ ಲೋಕಾಯುಕ್ತಕ್ಕೆ ದೂರು ನೀಡಿ, ಲಂಚದ ಕುಳಗಳನ್ನು ಬಲೆಗೆ ಕೆಡವಿದ್ದರು. ಈಗ ಲಂಚ ಪಡೆದ ಇಬ್ಬರೂ ಬಂಧನದಲ್ಲಿದ್ದಾರೆ. ಕಾರವಾರ ಕಾರಾಗೃಹದಲ್ಲಿ ಲಂಚಪಡೆದವರನ್ನು ಇಡಲಾಗಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 