ಪಿಡಿಓ ಆಫ್ ದಿ ಮಂತ್ ಪ್ರಶಸ್ತಿಗೆ ನಾಗೇಂದ್ರ ನಾಯ್ಕ ಭಾಜನ
Nagendra Nayka selected for PDO of the Month Award
ಕಾರವಾರ 07: ಜೂನ್-2025 ಮಾಹೆಯ “ಬೆಸ್ಟ್ ಪಿಡಿಓ ಆಪ್ ದಿ ಮಂತ್” ಪ್ರಶಸ್ತಿಗೆ ಭಾಜನರಾದ ಅಂಕೋಲಾ ತಾಲೂಕಿನ ಬೊಬ್ರವಾಡ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ನಾಗೇಂದ್ರ ಮಹಾದೇವ ನಾಯ್ಕ ಅವರಿಗೆ ನಗರದ ಜಿಲ್ಲಾ ಪಂಚಾಯತ ಕೇಸ್ವಾನ್ ಹಾಲ್ನಲ್ಲಿ ಸೋಮವಾರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ ಅವರು ಪ್ರಶಸ್ತಿ ನೀಡಿ, ಅಭಿನಂದಿಸಿದರು.
ಬಳಿಕ ಸಿಇಓ ಮಾತನಾಡಿ, ಉತ್ತರ ಕನ್ನಡ ಜಿಲ್ಲಾ ಪಂಚಾಯತನ ಎಲ್ಲ ಪಿಡಿಓಗಳು ತುಂಬ ಚೆನ್ನಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದು, ನಮ್ಮ ಜಿಲ್ಲಾ ಪಂಚಾಯತ ಕರ್ನಾಟಕದ ಪ್ರಮುಖ ಐದರಲ್ಲಿ ಒಂದು ಎಂದು ಗುರುತಿಸಲು ಪಿಡಿಓಗಳ ಕಾರ್ಯ ಮಹತ್ತರವಾಗಿದೆ. ಹಾಗಾಗಿ ಅವರುಗಳನ್ನು ಗುರುತಿಸಿ ಸತ್ಕಾರ ಮಾಡಿ, ಅಭಿನಂದಿಸುವುದರಿಂದ ಎಲ್ಲರಲ್ಲಿ ಕಾರ್ಯಪ್ರವರ್ತತೆ ಹೆಚ್ಚಿಸಲು ಸಾಧ್ಯವೆಂದು ಹೇಳಿದರು.
ಈ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿಯ ಯೋಜನಾ ನಿರ್ದೇಶಕ ಕರೀಂ ಆಸದಿ, ಆಡಳಿತ ಶಾಖೆಯ ಸಹಾಯಕ ನಿರ್ದೇಶಕ ವೆಂಕಟ್ರಾಯ ನಾಯ್ಕ, ಸಹಾಯಕ ಯೋಜನಾ ಅಧಿಕಾರಿ ಕೃಷ್ಣಾ ಶಾಸ್ತ್ರಿ ಹಾಗೂ ಲೆಕ್ಕ ಅಧಿಕ್ಷಕ ಸೂರ್ಯಕಾಂತ ಸೇರಿದಂತೆ ಜಿಲ್ಲಾ ಪಂಚಾಯತ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 