ಸಂಗೀತ ಒಂದು ಸಾಧನೆ ಆರಾಧನೆ: ಕಾಕಡೆ
Music is a form of worship: Kakade
ಗೋಕಾಕ 14: ಪರಿಶ್ರಮದಿಂದ ಮಾತ್ರ ಸಾಧನೆ ಸಾಧ್ಯ. ಹಾಡಿನ ಮೋಡಿಗೆ ಒಳಗಾಗದಿರುವವರು ಭೂಮಿಯ ಮೇಲೆ ಯಾರೂ ಇಲ್ಲ, ಸಂಗೀತ ಒಂದು ಸಾಧನೆ ಮತ್ತು ಸಂಗೀತ ಒಂದು ಆರಾಧನೆ, ಕಷ್ಟದಿಂದಲೇ ಸಾಧನೆಯ ಶಿಖರವೇರಿದ ಆಶಾ ಭೋಂಸ್ಲೆ ಅಮರಕಲಾವಿದೆ. ಎಂದು ಶಿಕ್ಷಕ ಹಾಗೂ ವಾಗ್ಮಿ ರಾಮಚಂದ್ರ ಕಾಕಡೆ ಹೇಳಿದರು.
ಅವರು ಗೋಕಾವಿ ಗೆಳೆಯರ ಬಳಗ ಮಧುರ ಸಂಗೀತ ಬಳಗ ಗುಂಪು ಕಲಾವಿದರು, ಶ್ರೀ ಸರ್ವೇಶ್ವರ ಜಾನಪದ ಕಲಾ ಸಂಸ್ಥೆ, ಬಿಂದು ಸಂಸ್ಥೆ ಇವುಗಳ ಸಂಯುಕ್ತಾಶ್ರಯದಲ್ಲಿ ಸಿದ್ದಾರ್ಥ ಲಲಿತ ಕಲಾ ಮಹಾವಿದ್ಯಾಲಯದಲ್ಲಿ ಹೆಸರಾಂತ ಚಲನಚಿತ್ರ ಗಾಯಕಿ ಆಶಾ ಭೋಂಸ್ಲೆ ಶೋಕ ಆಚರಣೆ ಸಭೆಯಲ್ಲಿ ಮಾತನಾಡಿದರು.
ಮೂಡಲಗಿ ಚೈತನ್ಯ ಆಶ್ರಮದ ವೈ ಬಿ ಪಾಟೀಲ, ಶಿಕ್ಷಕ ಹಾಗೂ ಚಿಂತಕ ಶಂಕರ ಕ್ಯಾಸ್ತಿ, ಹಿರಿಯ ಬೈಲಾಟ ಕಲಾವಿದ ಹಾಗೂ ಸಾಹಿತಿ ಈಶ್ವರ್ ಚಂದ್ರ ಬೆಟಗೇರಿ, ಶಿಕ್ಷಕ ಹಾಗೂ ಕವಿ ಈಶ್ವರ ಮಮದಾಪುರ, ನೇಸರಗಿಯ ಸಾಹಿತಿ ಸಿ.ವಾಯ್ ಮೆಣಸಿನಕಾಯಿ, ಬಸವಜೋತಿ ಐಟಿಐ ಕಾಲೇಜ್ ಚೇರ್ಮನ್ ಅಶೋಕ್ ಲಗಮಪ್ಪ ಗೋಳ ಇದ್ದರು. ಸಾಹಿತಿ ಹಾಗೂ ಕಲಾವಿದ ಜಯಾನಂದ ಮಾದರ ಪ್ರಾಸ್ತಾವಿಕ ಮಾತನಾಡಿದರು.ಚಿಂತಕ ಅರುಣ ಸವತಿಕಾಯಿ ನಿರೂಪಿಸಿ ವಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 