ಯೆಮನ್ನ ಮೊಚಾ ನಗರದ ಮೇಲೆ ಹೌತಿ ಬಂಡುಕೋರರಿಂದ ಕ್ಷಿಪಣಿ ದಾಳಿ: 10 ಸಾವು
ಅದೇನ್, ಯೆಮೆನ್, ನವೆಂಬರ್ 7: ಇರಾನ್ ಮೂಲದ ಹೌತಿ ಬಂಡುಕೋರರು ಬುಧವಾರ ಸಂಜೆ ಯೆಮನ್ನ ಕೆಂಪು ಸಮುದ್ರದ ಕರಾವಳಿ ನಗರವಾದ ಮೋಚಾದಲ್ಲಿ ಸರ್ಕಾರಿ ಪರ ಮಿಲಿಟರಿ ನೆಲೆಗಳ ಮೇಲೆ ಹಲವು ಬ್ಯಾಲಿಸ್ಟಿಕ್ ಕ್ಷಿಪಣಿಗಳ ಮೂಲಕ ದಾಳಿ ನಡೆಸಿದ್ದು, 10 ಮಂದಿ ಸಾವನ್ನಪ್ಪಿದ್ದಾರೆ ಎಂದು ಭದ್ರತಾ ಅಧಿಕಾರಿಯೊಬ್ಬರು ಕ್ಸಿನ್ಹುವಾಕ್ಕೆ ತಿಳಿಸಿದ್ದಾರೆ. ಮೊಚಾ ನಗರದ ವಿವಿಧ ಮಿಲಿಟರಿ ನೆಲೆಗಳು ಮತ್ತು ನಾಗರಿಕ ಸಂಸ್ಥೆಗಳ ವಿರುದ್ಧ ಹೌತಿ ಬಂಡುಕೋರರು ಸುಮಾರು ನಾಲ್ಕು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದರು" ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಸರ್ಕಾರದ ಪರ ಭದ್ರತಾ ಮೂಲಗಳು ತಿಳಿಸಿವೆ. ಬ್ಯಾಲಿಸ್ಟಿಕ್ ಕ್ಷಿಪಣಿಗಳಲ್ಲಿ ಎರಡು ಕ್ಷಿಪಣಿ, ಸರ್ಕಾರದ ಮಿಲಿಟರಿ ಪಡೆಗಳ ಆಹಾರ ಗೋದಾಮುಗಳಿಗೆ ಅಪ್ಪಳಿಸಿದ ಪರಿಣಾಮ ಆರು ಮಂದಿ ಸಾವನ್ನಪ್ಪಿದರು ಮತ್ತು ಹಲವಾರು ಮಂದಿ ಗಾಯಗೊಂಡರು ಎಂದು ಮೂಲಗಳು ತಿಳಿಸಿವೆ. ಹೌತಿ ಬಂಡುಕೋರರು ಹಾರಿಸಿದ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಸರ್ಕಾರದ ಪರ ಜೈಂಟ್ಸ್ ಬ್ರಿಗೇಡ್ಗಳ ಮಿಲಿಟರಿ ನೆಲೆಯನ್ನು ಗುರಿಯಾಗಿಸಿವೆ ಎಂದು ಅವರು ಹೇಳಿದರು. ಮೋಚಾ ವಿರುದ್ಧದ ಹೌತಿ ದಾಳಿಯ ಸಮಯದಲ್ಲಿ ಸ್ಫೋಟಕಗಳು ತುಂಬಿದ ಡ್ರೋನ್ಗಳನ್ನು ಬಳಸಲಾಗಿದೆ ಎಂದು ನಿವಾಸಿಗಳು ಕ್ಸಿನ್ಹುವಾಕ್ಕೆ ದೃಢಪಡಿಸಿದ್ದಾರೆ. ಸ್ಫೋಟಕಗಳಿಂದ ತುಂಬಿದ ಡ್ರೋನ್ ತಮ್ಮ ಮನೆಗಳ ಮೇಲೆ ಅಪ್ಪಳಿಸಿ ಸುಮಾರು ನಾಲ್ಕು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು. 2017 ರಲ್ಲಿ ಹೌತಿ ಬಂಡುಕೋರರ ವಿರುದ್ಧ ನಡೆದ ಭಾರೀ ಯುದ್ಧಗಳ ನಂತರ ಯೆಮನ್ನ ಪಶ್ಚಿಮ ಕೆಂಪು ಸಮುದ್ರದ ಕರಾವಳಿಯ ಆಯಕಟ್ಟಿನ ನಗರವಾದ ಮೋಚಾವನ್ನು ಸರ್ಕಾರಿ ಪರ ಪಡೆಗಳು ವಶಪಡಿಸಿಕೊಂಡಿದ್ದವು. ಹೌತಿ ಬಂಡುಕೋರರು 2014 ರ ಕೊನೆಯಲ್ಲಿ ರಾಜಧಾನಿ ಸನಾ ಸೇರಿದಂತೆ ಉತ್ತರ ಯೆಮೆನ್ ಪ್ರಾಂತ್ಯಗಳನ್ನು ವಶಪಡಿಸಿಕೊಂಡರು, ಬಲವಂತವಾಗಿ ಅಧ್ಯಕ್ಷ ಅಬ್ದು-ರಬ್ಬು ಮನ್ಸೂರ್ ಹಾದಿ ಮತ್ತು ಅವರ ಸರ್ಕಾರವನ್ನು ನೆರೆಯ ಸೌದಿ ಅರೇಬಿಯಾದಲ್ಲಿ ಗಡಿಪಾರು ಮಾಡಲು ಒತ್ತಾಯಿಸಲಾಯಿತು. ಯೆಮೆನ್ ಅನ್ನು ರಕ್ಷಿಸಲು ಮತ್ತು ಇರಾನ್ನ ಪ್ರಭಾವವನ್ನು ಹಿಮ್ಮೆಟ್ಟಿಸಲು ಹಾದಿ ಅವರು ನೀಡಿದ ಅಧಿಕೃತ ಮನವಿಗೆ ಪ್ರತಿಕ್ರಿಯೆಯಾಗಿ ಸೌದಿ ಅರೇಬಿಯಾ ಮತ್ತು ಇತರ ಹಲವಾರು ಅರಬ್ ರಾಷ್ಟ್ರಗಳು ರಚಿಸಿದ ಒಕ್ಕೂಟವು 2015 ರ ಮಾರ್ಚ್ನ್ಲ್ಲಿ ಹೌತಿಗಳ ವಿರುದ್ಧದ ಯೆಮೆನ್ ಸಂಘರ್ಷದಲ್ಲಿ ಮಿಲಿಟರಿ ಹಸ್ತಕ್ಷೇಪ ಮಾಡಿತು.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 