ಧರ್ಮದ ಮಾರ್ಗದಲ್ಲಿ ಬದುಕು ಸಾಗಲಿ: ಗುರುಪಾದ ಮಹಾಸ್ವಾಮಿಗಳು

ಧರ್ಮದ ಮಾರ್ಗದಲ್ಲಿ ಬದುಕು ಸಾಗಲಿ: ಗುರುಪಾದ ಮಹಾಸ್ವಾಮಿಗಳು  May life be led on the path of righteousness: Gurupada Mahaswamiji


ಬೀಳಗಿ 10: ಜಾನಮಟ್ಟಿ ಗ್ರಾಮದ ಅಡವಿಸಿದ್ದೇಶ್ವರ ಮಠದಲ್ಲಿ ನಡೆದ 31ನೇ ಶ್ರಾವಣ ಮಾಸದ ಪ್ರವಚನ ಮಂಗಲೋತ್ಸವದಲ್ಲಿ ಅಡವಿಸಿದ್ದೇಶ್ವರ ಮಠದ ಗುರುಪಾದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿದರು.  ಕತ್ತರಿ ಬೇರಿ​‍್ಡಸುವ ಸಂಕೇತವಾದರೆ, ಸೂಜಿ ಜೋಡಿಸುವ ಸಂಕೇತವಾಗಿದೆ.  ಸೂಜಿಯಂತೆ ಧರ್ಮವು ಸಮಾಜವನ್ನು ಒಗ್ಗೂಡಿಸುತ್ತದೆ. ಮನುಷ್ಯ ಸ್ವಾರ್ಥಕ್ಕಾಗಿ ಬದುಕದೆ ಧರ್ಮ ಹಾಗೂ ರಾಷ್ಟ್ರದ ಹಿತಕ್ಕಾಗಿ ಜೀವನ ನಡೆಸಬೇಕು. ಆತ್ಮಜಾಗೃತಿ ಮತ್ತು ವಾಸ್ತವ ಪ್ರಜ್ಞೆ ಪ್ರತಿಯೊಬ್ಬರಲ್ಲೂ ಇರಬೇಕು ಎಂದು ಅವರು ಹೇಳಿದರು.  ಪ್ರವಚನಕಾರ ಹುಚ್ಚಯ್ಯ ಈರಯ್ಯ ಹಿರೇಮಠ ಮಾತನಾಡಿ, ಶರಣರು ಅಂತರಂಗ ಹಾಗೂ ಬಹಿರಂಗ ಶುದ್ಧಿಗೆ ಆದ್ಯತೆ ನೀಡಿ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು ಎಂದರು.  ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಿ.ಎಂ. ಸಾವಕಾರ ಮಾತನಾಡಿ, ಸನ್ಮಾರ್ಗದ ಬದುಕಿಗೆ ಪುರಾಣ-ಪ್ರವಚನಗಳು ಅಗತ್ಯವಾಗಿವೆ ಎಂದರು.