ವಿವಾಹಿತ ಮಹಿಳೆ ಆತ್ಮಹತ್ಯೆ
Married woman commits suicide
ರಾಯಬಾಗ 04: ವಿವಾಹಿತ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಆರತಿ ಪ್ರಶಾಂತ ಕಾಂಬಳೆ (26) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಮೂಲತಃ ಕಾಗವಾಡ ತಾಲೂಕಿನ ಕುಸನಾಳ ಗ್ರಾಮದ ಆರತಿ ಕಾಂಬಳೆ ಇತಳನ್ನು ಮೊರಬ ಗ್ರಾಮದ ಪ್ರಶಾಂತ ಇತನೊಂದಿಗೆ ವಿವಾಹ ಮಾಡಿ ಕೊಡಲಾಗಿತ್ತು. ಗಂಡ ಮತ್ತು ಮಕ್ಕಳೊಂದಿಗೆ ವಾಸವಾಗಿದ್ದರೂ ಕೂಡ ಇತಳನ್ನು ಅದೇ ಗ್ರಾಮದ ಸಾಗರ ಕಾಂಬಳೆ ಎಂಬುವನು ನಿನ್ನ ಗಂಡ ಮತ್ತು ಮಕ್ಕಳನ್ನು ಬಿಟ್ಟು ನನ್ನ ಜೊತೆ ಬಾಳ್ವೆ ಮಾಡು ಬಾ ನನ್ನ ಮದುವೆ ಮಾಡಿಕೊ ಇಲ್ಲದಿದ್ದರೆ ನಿನ್ನನ್ನು ಸಾಯುವವರೆಗೆ ಬಿಡುವುದಿಲ್ಲಾ ಅಂತಾ ಮೇಲಿಂದ ಮೇಲೆ ಹೇಳುತ್ತಾ ಮಾನಸಿಕ ತ್ರಾಸ ನೀಡಿ, ಕಿರುಕುಳ ನೀಡಿದ್ದರಿಂದ ಇತನ ಕಿರಕುಳಕ್ಕೆ ಬೇಸತ್ತು ಆರತಿ ಕಾಂಬಳೆ ಇವಳು ಸೋಮವಾರ ಮುಂಜಾನೆ 11.30 ಗಂಟೆ ಸುಮಾರಿಗೆ ಬೊಮ್ಮನಾಳ ಗ್ರಾಮದಲ್ಲಿರುವ ತನ್ನ ಸಂಬಂಧಿಕರ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತ ಆರತಿ ಇವಳ ತಾಯಿ ಲಕ್ಷ್ಮೀಬಾಯಿ ಭೀಮು ಕಾಂಬಳೆ ಇವರು ರಾಯಬಾಗ ಪೊಲೀಸ್ ಠಾಣೆ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 