ಹಾವೇರಿ 16 :ಪ್ರಗತಿಪರ ರೈತರು, ಸಾಮಾಜಿಕ ಕಳಕಳಿ ಹೊಂದಿರುವ ಅಂಗಡಿ ಮಲ್ಲೇಶಪ್ಪನವರ ಆದರ್ಶಗಳು ಕೇವಲ ತಮ್ಮ ಮನೆತನಕ್ಕೆ ಸೀಮಿತಗೊಳ್ಳದೇ ಪುಸ್ತಕ ರೂಪದಲ್ಲಿ ಅವರ ವ್ಯಕ್ತಿತ್ವ ಅನಾವಣಗೊಂಡಿರುವುದು ಭವಿಷ್ಯದ ಯುವ ಪೀಳಿಗೆಗೆ ಮಾದರಿಯಾಗಲಿದೆ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.
ತಾಲೂಕಿನ ಹೊಸರಿತ್ತಿ ಗ್ರಾಮದ ಜಿ.ವಿ.ಹಳ್ಳೀಕೆರಿ ಕಾಲೇಜಿನ ಸಭಾಂಗಣದಲ್ಲಿ ರವಿವಾರ ಏರಿ್ಡಸಿದ್ದ ಪರೋಪಕಾರಿ ಅಂಗಡಿ ಮಲ್ಲೇಶಪ್ಪನವರ ವ್ಯಕ್ತಿತ್ವ ದರ್ಶನ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಸಾಹಿತಿ ಸಿ.ಎಸ್.ಮರಳಿಹಳ್ಳಿ ಅವರು ಅಂಗಡಿ ಮಲ್ಲೇಶಪ್ಪನವರ ಬದುಕಿನ ಎಲ್ಲ ಮಜಲುಗಳನ್ನು ಅಕ್ಷರರೂಪದಲ್ಲಿ ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಜೀವನ ನಡೆಸುತ್ತಿರುವ ಮಲ್ಲೇಶಪ್ಪನವರ ವ್ಯಕ್ತಿತ್ವ ಪುಸ್ತಕ ರೂಪದಲ್ಲಿ ಅನಾವಣಗೊಂಡಿದ್ದು ಅವರು ಹುಟ್ಟಿದ್ದು ಸಾರ್ಥಕವಾಗಿದೆ.
ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ಮಾತನಾಡಿ ಜೀವನದಲ್ಲಿ ಏನಾದರು ಸಾಧಿಸುವುದು ಬಹಳ ಮುಖ್ಯ. ಆದರೆ ನಾವು ಜೀವನವನ್ನು ಸಾಗಿಸುವ ಜನರನ್ನು ಬಹಳಷ್ಟು ನೋಡುತ್ತವೆ. ಜೀವನ ಸಾಗಿಸುವ ಬದಲು ಜೀವನದಲ್ಲಿ ಸಾಧನೆ ಮಾಡುವುದು ಮುಖ್ಯ. ಗುದ್ಲೇಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನದ ಸಂಸ್ಥಾಪಕ ಧರ್ಮದರ್ಶಿ ವೀರಣ್ಣ ಚಕ್ಕಿ ಮಾತನಾಡಿ ಮಲ್ಲೇಶಪ್ಪ ಅಂಗಡಿ ಅವರು ಹಾವೇರಿ ಎಪಿಎಂಸಿ ಅಧ್ಯಕ್ಷರಾಗಿ, ರಾಷ್ಟ್ರೀಯ ಶಿಕ್ಷಣ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿ ಅನೇಕ ಕೊಡುಗೆ ನೀಡಿದ್ದಾರೆ. ಹಾವೇರಿ ತಾಲೂಕಿನ ಪೂರ್ವಭಾಗದಲ್ಲಿ ಅಭಿವೃದ್ಧಿ ಪರ ಕಾರ್ಯಗಳಿಂದ ಹೆಸರುವಾಗಿಯಾಗಿದ್ದು, ಇಂತಹ ಹಿರಿಯ ವ್ಯಕ್ತಿಗಳ ಆದರ್ಶಗಳು ಸಮಾಜಕ್ಕೆ ಮಾದರಿಯಾಗಿವೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಮಾತನಾಡಿದರು.ಇದೇ ಸಂದರ್ಭದಲ್ಲಿ ಪರೋಪಕಾರಿ ಅಂಗಡಿ ಮಲ್ಲೇಶಪ್ಪನವರ ವ್ಯಕ್ತಿತ್ವ ದರ್ಶನ ಪುಸ್ತಕವನ್ನು ರಚಿಸಿದ ಸಾಹಿತಿ ಸಿ.ಎಸ್.ಮರಳಿಹಳ್ಳಿ ಹಾಗೂ ಪುಸ್ತಕ ಪ್ರಕಟಿಸಲು ಸಹಕರಿಸಿದ ನಿವೃತ್ತ ಉಪತಹಸೀಲ್ದಾರ ವೀರಯ್ಯ ಹಿರೇಮಠ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅಗಡಿ ಪ್ರಭುಸ್ವಾಮಿ ಮಠದ ಗುರುಸಿದ್ದ ಸ್ವಾಮೀಜಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ವರ್ತಕರಾದ ನಿರಂಜನಪ್ಪ ಪಾವಲಿ, ವಿಶ್ರಾಂತ ಜಿಲ್ಲಾ ಮುಖ್ಯ ನ್ಯಾಯಾಧೀಶ ಸಿ.ವಿ.ಮರಗೂರ, ಕಸಾಪ ಪ್ರಥಮ ಜಿಲ್ಲಾಧ್ಯಕ್ಷ ಡಾ.ಕೆ.ಎಚ್.ಮುಕ್ಕಣ್ಣನವರ, ಹಾವೇರಿ ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ರುದ್ರಪ್ಪ ಹಳ್ಳಿಕೇರಿ, ರಮೇಶ ಏಕಬೋಟೆ, ಸಿದ್ದರಾಜ ಕಲಕೋಟಿ, ಶ್ರೀನಿವಾಸ ಏಕಬೋಟೆ, ಗೀರೀಶ ಅಂಕಲಕೋಟಿ, ಮರಿಗೆಪ್ಪ ಅಂಗಡಿ, ದಾನಪ್ಪ ಅಂಗಡಿ, ಬಸವರಾಜ ಅಂಗಡಿ ಶಿದ್ರಾಮಪ್ಪ ಅಂಗಡಿ ಸೇರಿದಂತೆ ಇತರರು ಇದ್ದರು.ಶರಣಪ್ಪ ಹತ್ತಿಕೋಟಿ ಸ್ವಾಗತಿಸಿದರು. ವೀರಯ್ಯ ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು. ಎಚ್.ಆರ್.ಯಡಳ್ಳಿ ನಿರೂಪಿಸಿದರು.