7.30 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ: ಗೊಬ್ಬರ ಬೆಲೆ ಹೆಚ್ಚಳದಿಂದ ರೈತರು ಕಂಗಾಲು
ಸಂತೋಷಕುಮಾರ ಕಾಮತ
ಮಾಂಜರಿ 16: ರಾಜ್ಯದಲ್ಲಿ ಮುಂಗಾರು ಹಂಗಾಮು ಪ್ರಾರಂಭವಾಗಿದ್ದು ರೈತರಲ್ಲಿ ಸಂತಸ ಮೂಡಿಸಿದೆ. ಇದೀಗ ಜಿಲ್ಲೆಯಲ್ಲಿ ಒಟ್ಟು 7.30 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಆದರೆ ಇದೇ ವೇಳೆ ಗೊಬ್ಬರ ಬೆಲೆ ಹೆಚ್ಚಳವಾಗಿರುವುದು ರೈತರನ್ನು ಕಂಗಾಲಾಗಿಸಿದೆ.
ಮತ್ತೊಂದೆಡೆ ಗೊಬ್ಬರ ಖರೀದಿ ಮಾಡುವ ರೈತರಿಗೆ ಇದೀಗ ಬೀಜ ಮತ್ತು ರಸಗೊಬ್ಬರ ಮಾರಟಗಾರರು ಡಿಎಪಿ ಗೊಬ್ಬರದೊಂದಿಗೆ ನ್ಯಾನೊ ಯೂರಿಯಾ ಮತ್ತು ಜಿಂಕ್ ರಸಗೊಬ್ಬರ ಖರೀದಿ ಮಾಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಡಿಎಪಿ ಖರೀದಿ ಮಾಡುತ್ತಿದ್ದ ಪ್ರತಿಯೊಬ್ಬರೂ ಇದೀಗ ಅವಶ್ಯಕತೆಯಿಲ್ಲದೆ ಇರುವ ಗೊಬ್ಬರಗಳನ್ನು ಹೆಚ್ಚಿನ ಹಣ ನೀಡಿ ಖರೀದಿಸಬೇಕಾಗಿದೆ. ಇನ್ನುಳಿದ ಗೊಬ್ಬರ ಖರೀದಿ ಮಾಡದೆ ಹೋದಲ್ಲಿ ರೈತರಿಗೆ ಡಿಎಪಿ ಹಾಗೂ ಅವಶ್ಯಕತೆ ಇರುವೆ ಗೊಬ್ಬರ ನೀಡುತ್ತಿಲ್ಲ.
ರೈತರು 50 ಕೆಜಿ ತೂಕ ಹೊಂದಿರುವಒಂದು ಚೀಲ ಡಿಎಪಿ ಗೊಬ್ಬರಕ್ಕೆ 1350 ರೂ ಪಾವತಿಸಬೇಕಾಗಿದೆ. ಸಣ್ಣ ಹಿಡುವಳಿದಾರರು ಕನಿಷ್ಠ ಎರಡು ಚೀಲ ಹಾಗೂ ದೊಡ್ಡ ಹಿಡುವಳಿದಾರರಾಗಿದ್ದಲ್ಲಿ ಅವರು 20ಕ್ಕಿಂತ ಹೆಚ್ಚು ಚೀಲ ಗೊಬ್ಬರ ಖರೀದಿಸಬೇಕಾಗಿದೆ. ಮೂರು ಚೀಲ ಡಿಎಪಿ ಗೊಬ್ಬರ ಖರೀದಿಸುವ ರೈತರು ಕಡ್ಡಾಯವಾಗಿ 600 ರೂ. ಮೌಲ್ಯದ 500 ಎಂಎಲ್ ದ್ರವರೂಪದ ನ್ಯಾನೊ ಯೂರಿಯಾ, ನ್ಯಾನೊ ಡಿಎಪಿ ಹಾಗೂ ಜಿಂಕ ರಸಗೊಬ್ಬರಗಳನ್ನು ದುಬಾರಿ ಹಣ ನೀಡಿ ಖರೀದಿ ಮಾಡುವಂತೆ ಬೀಜ ಹಾಗೂ ರಸಗೊಬ್ಬರ ಮಾರಟಗಾರರು ರೈತರ ಮೇಲೆಒತ್ತಡ ಹಾಕುತ್ತಿದ್ದಾರೆ. ಆದರೆ ಇಷ್ಟೆಲ್ಲಾ ಆದರೂ ಕೃಷಿ ಇಲಾಖೆ ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕುವಲ್ಲಿ ವಿಫಲರಾಗಿದ್ದಾರೆ ಎಂದು ರೈತರು ಕೃಷಿ ಇಲಾಖೆ ಅಧಿಕಾರಿಗಳ ಮೇಲೆ ಕಿಡಿಕಾರುತ್ತಿದ್ದಾರೆ.
ಇನ್ನು ಚಿಕ್ಕೋಡಿ, ನಿಪ್ಪಾಣಿ, ಕಾಗವಾಡ, ರಾಯಬಾಗ, ಆಥಣಿ, ಹುಕ್ಕೇರಿ ತಾಲೂಕಿನಲ್ಲಿ ರಸಗೊಬ್ಬರ ಬೀಜ ಮಾರಾಟಗಾರರು ರೈತರು ನ್ಯಾನೋ ಯೂರಿಯಾ ಅಥವಾ ನ್ಯಾನೋ ಡಿವಿಪಿ ಖರೀದಿಸಲು ನಿರಾಕರಿಸಿದರೆ ಅಂತಹವರಿಗೆ ಡಿಎಪಿ ಗೊಬ್ಬರ ಮಾರಾಟಮಾಡದೆ ಇರಲು ನಿರ್ಧರಿಸಿದ್ದಾರೆ. ಹೀಗಾಗಿ ರೈತರ ಮೇಲೆ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಒಂದು ಅಂದಾಜಿನ ಪ್ರಕಾರ ಗಡಿ ಜಿಲ್ಲೆಯಲ್ಲಿ 1 ಸಾವಿರಕ್ಕಿಂತ ಹೆಚ್ಚು ಖಾಸಗಿ ಬೀಜ ರಸಗೊಬ್ಬರ ಮಾರಾಟಗಾರರಿದ್ದಾರೆ. ಅವರೆಲ್ಲಾ ಅವಶ್ಯವಿಲ್ಲದೆ ಇರುವ ಗೊಬ್ಬರ ಖರೀದಿ ಮಾಡುವಂತೆ ಒತ್ತಡ ಹಾಕುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಿ ಎಂದು ಕೃಷಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೆ ಪ್ರಯೋಜನವಾಗಿಲ್ಲ ರೈತ ಎಂದುಹೋರಾಟಗಾರ ಮಂಜುನಾಥ ಬಾಳು ಪರಗೌಡರ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಖಾಸಗಿ ಬೀಜ ಮತ್ತು ರಸಗೊಬ್ಬರ ಮಾರಾಟಗಾರರಿಂದ ಆಕ್ರಮ ಹಣ ಪಡೆದು ಕೃಷಿ ಇಲಾಖೆ ಅಧಿಕಾರಿಗಳೂ ಅವರ ಜೊತೆ ಶಾಮೀಲಾಗಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಇನ್ನು ಮುಂದೆಯಾದರೂ ಕೃಷಿ ಇಲಾಖೆ ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಲು ಕಾಯದು ನೋಡಬೇಕಾಗಿದೆ
ಜಿಲ್ಲೆಯಲ್ಲಿನ ಮಾರಾಟ ಅಂಗಡಿಯವರು ಡಿಎಪಿ
ಖಾಸಗಿ ಬೀಜ ಮತ್ತು ರಸಗೊಬ್ಬರ ಗೊಬ್ಬರ ಬೇಕಾದಲ್ಲಿ ನ್ಯಾನೋ ಹಾಗೂ ಜಿಂಕ ರಸಗೊಬ್ಬರ ಖರೀದಿ ಮಾಡುವಂತೆ ಒತ್ತಡ ಹಾಕುತ್ತಿದ್ದಾರೆ. ಈ ಕುರಿತು ಕೃಷಿ ಅಧಿಕಾರಿಗಳ ಗಮನಕ್ಕೆ ತಂದರೂ ಅವರು ಕ್ರಮ ಕೈಗೊಂಡಿಲ್ಲ. ನ್ಯಾನೊ ಯೂರಿಯಾ ಹಾಗೂ ನ್ಯಾನೊ ಡಿಎಪಿ ರಸಗೊಬ್ಬರಗಳು ಇದೀಗ ಬಿತ್ತನೆ ಮಾಡಲು ಅವುಗಳ ಅವಶ್ಯಕತೆಯಿಲ್ಲ. ರೈತರಿಗೆ ಬೇಕಾದ ಸಮಯದಲ್ಲಿ ಅವರು ಖರೀದಿಸುತ್ತಾರೆ. ಇದಕ್ಕೆ ಒತ್ತಡ ಹಾಕುತ್ತಿರುವುದರಿಂದ ಆರ್ಥಿಕವಾಗಿ ಹೊರೆಯಾಗುತ್ತದೆ. ರೈತರಿಗೆ ಆರ್ಥಿಕವಾಗಿ ಹೊರೆಯಾಗುತ್ತದೆ
ಪ್ರಕಾಶ್ ಹೇಮಗಿರೆ ಪ್ರಗತಿಪರ ರೈತ ಶಿರಗುಪ್ಪಿ
ರೈತರು ಬೆಳೆದ ಬೆಳೆಗಳಿಗೆ ಹೆಚ್ಚಿನ ಪೋಷಕಾಂಶ ದೊರೆಯಲಿ ತಿನ್ನುವ ಕಾರಣಕ್ಕಾಗಿ ಕೆಲವು ಅಂಗಡಿಯವರು ಖರೀದಿಸಲು ಸೂಚಿಸುತ್ತಿದ್ದಾರೆ. ಒಂದು ವೇಳೆ ಕಡ್ಡಾಯವಾಗಿ ಖರೀದಿ ಮಾಡುವಂತೆ ಕಂಡಿಶನ್ ಹಾಕಿದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು.
ಎಚ್.ಡಿ. ಕೋಳೆಕರ
ಕೃಷಿ ಇಲಾಖೆ ಅಧಿಕಾರಿಗಳು