ಬೆಳಗಾವಿ, 16 : ಸಾಹಿತ್ಯವು ಸಮಾಜವನ್ನು ತಿದ್ದುವುದರೊಂದಿಗೆ ನಮ್ಮ ಸಂವೇದನೆಗಳನ್ನು ಸಾಕಾರಗೊಳಿಸುತ್ತದೆ. ಬರಹವು ವ್ಯಕ್ತಿಯ ವ್ಯಕ್ತಿತ್ವದ ಸಾಕಾರ ಸ್ವರೂಪವಾಗಿದೆ. ವಿದ್ಯಾರ್ಥಿಗಳು ಈ ರೀತಿಯ ಕಾರ್ಯಕ್ರಮಗಳ ಮೂಲಕ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸನ್ನದ್ಧರಾಗಬೇಕೆಂದು ಎಲ್ಲರಿಗೂ ಶುಭಹಾರೈಸಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸನ್ಮಾನ್ಯ ಕುಲಪತಿಗಳಾದ ಪ್ರೊ. ಸಿ. ಎಂ. ತ್ಯಾಗರಾಜ ಅವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕರಾದ ಡಾ. ಹನುಮಂತಪ್ಪ ಸಂಜೀವಣ್ಣನವರ ಅವರ ನಾಲ್ಕು ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಕೋರಿದರು.
ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಪ್ರೊ. ಗುಂಡಣ್ಣ ಕಲಬುರ್ಗಿ ಅವರು ಈ ನಾಲ್ಕು ಕೃತಿಗಳು ಸಂಶೋಧನೆ ಹಾಗೂ ವಿಮರ್ಶೆಯಿಂದ ಕೂಡಿದೆ. ಇಂತಹ ವಾತಾವರಣವು ಪ್ರತಿಯೊಬ್ಬರಲ್ಲಿ ಬೆಳೆಯಬೇಕು ಇದರಿಂದ ಸಮಾಜದಲ್ಲಿ ಸಾಹಿತ್ಯ ಸಾಂಸ್ಕೃತಿಕ ಚಿಂತನೆಗಳು ನಡೆಯುವುದರಿಂದ ಆರೋಗ್ಯಕರ ಸಮಾಜವನ್ನು ನಿರ್ಮಿಸಬಹುದೆಂದು ಹೇಳಿದರು.
ಪುಸ್ತಕಗಳನ್ನು ಧಾರವಾಡದ ಹಿರಿಯ ಸಾಹಿತಗಳಾದ ಡಾ. ರುದ್ರಣ್ಣ ಚಿಲುಮಿ ಅವರು ಮಾತನಾಡಿ ಈ ಕೃತಿಗಳು ಸಂಶೋಧನೆ ಮತ್ತು ವಿಮರ್ಶೆಯಿಂದ ಕೂಡಿದ ಲೇಖನಗಳಾಗಿದ್ದು, ವಿದ್ಯಾರ್ಥಿಗಳು ಸಂಶೋಧಕರು ಓದಲೇಬೇಕಾದ ಪ್ರಮುಖ ಕೃತಿಗಳಾಗಿವೆ ಎಂದು ಪುಸ್ತಕ ಪರಿಚಯ ಮಾಡಿದರು. ಇನ್ನೊಬ್ಬ ಹಾಗೇಯೇ ಡಾ. ಪಿ. ನಾಗರಾಜರವರು ಇನ್ನೆರಡು ಕೃತಿಗಳನ್ನು ಪರಿಚಯಮಾಡುವುದರ ಮೂಲಕ ತಲಸ್ಪರ್ಶಿಯಾಗಿ ಅವುಗಳಲ್ಲಿ ರಚನೆಗೊಂಡ ಲೇಖನಗಳನ್ನು ಪರಿಚಯಿಸುತ್ತಾ ಸಾಹಿತ್ಯದ ಪರಂಪರೆಯೊಂದಿಗೆ ತೌಲನಿಕವಾಗಿ ನೋಡುವುದರೊಂದಿಗೆ ಪುಸ್ತಕಗಳು ಓದುಗರ ಗಮನವನ್ನು ಸೆಳೆಯುತ್ತವೆ ಈ ಪುಸ್ತಕಗಳನ್ನು ಪರಿಚಯಿಸುವುದರಿಂದ ಸಂತೋಷವಾಗುತ್ತಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಮಹೇಶ ಗಾಜಪ್ಪನವರ ವಹಿಸಿದ್ದರು. ಲೇಖಕರಾದ ಡಾ. ಹನುಮಂತಪ್ಪ ಸಂಜೀವಣ್ಣನವರ, ವಿಭಾಗದ ಪ್ರಾಧ್ಯಾಪಕರಾದ ಡಾ. ಗಜಾನನ ನಾಯ್ಕ, ಡಾ. ಶೋಭಾ ನಾಯಕ ವಿವಿಧ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಸ್ವಾಗತವನ್ನು ಡಾ. ಗಜಾನನ ನಾಯ್ಕ, ನಿರೂಪಣೆಯನ್ನು ಕುಮಾರಿ ಅರ್ಿತಾ ಮಳವಾಡ, ವಂದನಾರೆ್ಣಯನ್ನು ಶ್ರೀ. ಸುರೇಶ ಬಯ್ಯಾರ ನೆರವೇರಿಸಿದರು.