ಲಿಂಗೈಕ್ಯ ವಿರಕ್ತ ಸ್ವಾಮಿಗಳ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ: ಬೃಹತ್ ಬೈಕ್ ರ್ಯಾಲಿ
Lingayikya Virakta Swami statue installation program: Huge bike rally
ತಾಳಿಕೋಟಿ 29: ಪಟ್ಟಣದ ಆರಾಧ್ಯ ದೈವ ಶ್ರೀ ಖಾಸ್ಗತೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಲಿಂಗೈಕ್ಯ ಶ್ರೀ ವಿರಕ್ತ ಮಹಾಸ್ವಾಮಿಗಳ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ರವಿವಾರ ಬೃಹತ್ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಯಿತು.
ಪಟ್ಟಣದ ಕೌಟಿಲ್ಯ ಅಕಾಡೆಮಿ ಅಧ್ಯಕ್ಷ ರಾಜಶೇಖರ ಸಜ್ಜನ ಅವರ ಕುಟುಂಬ ಸದಸ್ಯರು ಭಕ್ತಿಯಿಂದ ಕೊಡಮಾಡಿದ 4 ಅಡಿ ಎತ್ತರದ ಲಿಂಗೈಕ್ಯ ಶ್ರೀ ವಿರಕ್ತ ಶ್ರೀಗಳ ಮೂರ್ತಿಯ ಭವ್ಯ ಮೆರವಣಿಗೆಯ ಬೃಹತ್ ಬೈಕ್ ರ್ಯಾಲಿಗೆ ಪೂಜ್ಯ ಸಿದ್ದಲಿಂಗ ದೇವರು ಶ್ರೀ ಬಸವೇಶ್ವರ ವೃತ್ತದಲ್ಲಿ ಚಾಲನೆ ನೀಡಿದರು. ಅಲ್ಲಿಂದ ನೂರಾರು ಬೈಕ್ ಸವಾರರು ಓಂ ನಮಃ ಶಿವಾಯ ಶ್ರೀ ಖಾಸ್ಗತೇಶ್ವರ ಹಾಗೂ ಶ್ರೀ ವಿರಕ್ತ ಮಹಾ ಸ್ವಾಮಿಗಳ ಹೆಸರಲ್ಲಿ ಜಯ ಘೋಷಗಳನ್ನು ನಾಲ್ಕೂ ದಿಕ್ಕಿನಲ್ಲಿ ಮೊಳಗಿಸಿ ಆರಂಭಿಸಿದ ರ್ಯಾಲಿಯು ಬಸ್ ನಿಲ್ದಾಣ ಮಾರ್ಗವಾಗಿ ಮಹಾರಾಣಾ ಪ್ರತಾಪ್ ಸಿಂಹ ವೃತ್ತ ಶಿವಾಜಿ ವೃತ್ತ ಕತ್ರಿ ಬಜಾರ್ ರಸ್ತೆಯಿಂದ ಶ್ರೀ ಖಾಸ್ಗತೇಶ್ವರ ಮಠಕ್ಕೆ ತಲುಪಿತು ಅಲ್ಲಿ ಸಕಲ ಪೂಜಾ ವಿಧಿ ವಿಧಾನಗಳನ್ನು ಪೂರೈಸಿದ ನಂತರ ಮೂರ್ತಿಯ ಪ್ರತಿಷ್ಠಾಪನೆಯನ್ನು ಮಾಡಲಾಯಿತು.
ಕಾರ್ಯಕ್ರಮದಲ್ಲಿ ಗಣ್ಯರಾದ ಪ್ರಭುಗೌಡ ಮದರಕಲ್ಲ,ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ.ಕಟ್ಟಿಮನಿ, ಪರ್ಪ ಸಂಗಪ್ಪ ಸಜ್ಜನ, ಕಾಶಿನಾಥ ಸಜ್ಜನ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಡಿ. ವಿ.ಪಾಟೀಲ, ಜೈಸಿಂಗ್ ಮೂಲಿಮನಿ, ಮಹಾಂತೇಶ ಮುರಾಳ, ರಾಜು ಸಜ್ಜನ, ಇಬ್ರಾಹಿಂ ಮನ್ಸೂರ, ಅಶೋಕ ಚಿನಗುಡಿ, ತಿಪ್ಪಣ್ಣ ಸಜ್ಜನ,ರವಿಕಾಂತ ಚಂದುಕರ್, ರಾಜು ಅಲ್ಲಾಪೂರ, ನದೀಮ ಕಡು ಮತ್ತಿತರರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 