ಬಿಜೆಪಿ ಮನೆ ಬಿಟ್ಟು, ನಮ್ಮ ಮನೆಗೆ ಬರುವವರನ್ನು ಸ್ವಾಗತಿಸೋಣ

ಮುಂಡಗೋಡ 30: ಕೆನರಾ ಲೋಕಸಭಾ ಚುನಾವಣೆಯೆಂಬ ಪರೀಕ್ಷೆ ಬಂದಿದೆ.ನಮ್ಮ ಎದುರಾಳಿ ಬಿಜೆಪಿ ಮನೆ ಬಿಟ್ಟು ನಮ್ಮನೆಗೆ ಬರಲು ಹೊರಟಿರುವವರಿಗೆ ಸ್ವಾಗತ ಮಾಡಬೇಕಿದೆ ಎಂದು ಕಾಂಗ್ರೆಸ್ ಎಂಬುದು ದೊಡ್ಡ ಸಮುದ್ರ, ನಮಗೆ ಎಲ್ಲವನ್ನೂ ಅರಗಿಸಿಕೊಳ್ಳುವ ಶಕ್ತಿ ಇದೆ. ಯಾವ ಟೈಮ್ ನಲ್ಲಿ ಯಾವ ಆಪರೇಷನ್ ಮಾಡಬೇಕೆಂಬುದೂ ನನಗೆ ಗೊತ್ತಿದೆ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಳರ್ ಹೇಳಿದರು.ಗುರುವಾರ ಮುಂಡಗೋಡ  ಪಟ್ಟಣದ ಕಾಂಗ್ರೆಸ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾದ ಲೋಕಸಭಾ ಚುನಾವಣಾ ಪೂರ್ವಸಿದ್ದತಾ ಸಭೆಯಲ್ಲಿ ಮಾತನಾಡಿದರು ಅವರು, ಪಕ್ಷದಲ್ಲಿ ಎಷ್ಟೇ ಗುಂಪು ಹಾಗೂ ವೈಮಸ್ಸಿದ್ದರೂ ಚುನಾವಣೆಯಲ್ಲಿ ಲೋಕಸಭಾ ಒಗ್ಗಟ್ಟಾಗಿ ದುಡಿಯುತ್ತೀರೆಂಬ ವಿಶ್ವಾಸವಿದೆ. ಮುಂಡಗೋಡ ತಾಲೂಕಿನಲ್ಲಿ ವಿವಿಧಧರ್ಮ ಸಂಸ್ಕೃತಿಗಳಿದ್ದರೂ ಎಲ್ಲರೂ ಒಂದಾಗಿ ಬಾಳುತ್ತಿದ್ದಾರೆ. ಕಾಂಗ್ರೆಸ್ ಎಂದರೆ ನನ್ನ ಕುಟುಂಬವಿದ್ದಂತೆಇಲ್ಲಿ ಎಲ್ಲರ ಮಾತಿಗೂ ಬೆಲೆ ಇದೆ. ಪಕ್ಷ ನಿಮ್ಮ ಹಿಂದಿದೆ. ಕಾರ್ಯಕರ್ತರೂ ಪಕ್ಷದೊಂದಿಗೆ ಇರಬೇಕು. ಹಿಂದುಳಿದ ತಾಲೂಕು, ಜಿಲ್ಲೆಯ ಅಭಿವೃದ್ಧಿಗೆ ಸಂಸತ್ ನಲ್ಲಿ ಮಾತನಾಡಲು ಪಕ್ಷದ ಸಂಸದರು ಬೇಕೇ ಬೇಕು. ಇದಕ್ಕಾಗಿ ನನ್ನನ್ನ ನಿಮ್ಮ ಮನೆ ಮಗಳೆಂದು ಆಶೀರ್ವದಿಸಿ ಎಂದು ಡಾ ಅಂಜಲಿ ನಿಂಬಾಳ್ಕರ ಮನವಿಮಾಡಿದರು     

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂಟ್ಕರ್ ಮಾತನಾಡಿ, ಡಾ.ಅಂಜಲಿ ನಿಂಬಾಲ್ಕರ್ ಅವರಂಥ ಸರಳ- ಸಜ್ಜನಿಕೆಯ ಮಹಿಳೆ ನಮ್ಮ ಪಕ್ಷದ ಅಭ್ಯರ್ಥಿಯಾಗಿರುವುದು ಹಮ್ಮೆಯ ಸಂಗತಿ. ವೈದ್ಯರಾಗಿದ್ದರೂ ಇನ್ನಷ್ಟು ಸಾಮಾಜಿಕ ಕಾರ್ಯಗಳನ್ನ ಮಾಡಬೇಕೆಂಬ ಉತ್ಕಟ ಮನಸ್ಸಿನಿಂದ ರಾಜಕೀಯ ರಂಗ ಪ್ರವೇಶಿಸಿ, ವಿವಿಧ ಹುದ್ದೆಗಳನ್ನ ಅಲಂಕರಿಸಿ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಡಾ.ಅಂಜಲಿಯವರ ಗೆಲುವು ನಮ್ಮೆಲ್ಲರ ಗೆಲುವಿದ್ದಂತೆ. ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ತಿಳಿವಳಿಕೆ ನೀಡುತ್ತಾ ಮತ ಪಡೆಯಬೇಕಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂಟ್ಕರ್ ಮಾತನಾಡಿದರು.  

ಹಿರಿಯ ಕಾಂಗ್ರೆಸ್ ಮುಂಖಡರಾದ ಎಚ್‌.ಎಂ.ನಾಯ್ಕ, ಪಕ್ಷ ವಿರೋಧಿ ಕೆಲಸ ಮಾಡುವವರನ್ನ ಗುರುತಿಸುವ ಕೆಲಸ ಮಾಡದಿದ್ದರೆ ಭವಿಷ್ಯವಿಲ್ಲ. ಪಕ್ಷ ನಿಷ್ಠೆ ಇದ್ದವರನ್ನು ಜಿಲ್ಲಾ ಸಮಿತಿ ಮರೆಯಬಾರದು. ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಪಕ್ಷಕ್ಕೆ ಅನ್ಯಾಯಮಾಡಬಾರದು  ಡಾ.ಅಂಜಲಿ ತಾಯಿಯವರನ್ನ ಬಹುಮತದಿಂದ ಆರಿಸುವ  ಜವಾಬ್ದಾರಿ ಜಿಲ್ಲಾ ಸಮಿತಿಗೂ ಇದೆ, ಅದನ್ನ ನಿಷ್ಠೆಯಿಂದ ಮಾಡಬೇಕಿದೆ ಎಂದು ಹಿರಿಯ ಕಾಂಗ್ರೆಸ್ ಮುಂಖಡರಾದ ಎಚ್‌.ಎಂ.ನಾಯ್ಕ ತಿಳಿಸಿದ್ದರು   

ಮಾಜಿ ಶಾಸಕ ವಿ.ಎಸ್‌.ಪಾಟೀಲ್ ಮಾತನಾಡಿ, ಐದು ಗ್ಯಾರಂಟಿ ಕೊಟ್ಟು ರಾಜ್ಯದಲ್ಲಿ 1.17 ಕೋಟಿ ಆರ್ಥಿಕವಾಗಿ ಹಿಂದುಳಿದವರನ್ನ ಮೇಲಕ್ಕೆತ್ತುವ ಕೆಲಸ ಮಾಡಲಾಗಿದೆ. ತಾಲೂಕಿನಲ್ಲಿ 24,344 ಪಡಿತರ ಕಾರ್ಡ್‌ ನಲ್ಲಿ 19,888 ಜನರಿಗೆ ಅನ್ನಭಾಗ್ಯ ಹಣ ಜಮೆಯಾಗಿದೆ. ಕನಿಷ್ಠ ಎರಡು ಸಾವಿರ ಕುಟುಂಬಕ್ಕೆ ಗೃಹಲಕ್ಷ್ಮೀ ಹಣ ಬರುತ್ತಿದೆ. ಪ್ರತಿ ಬೂತ್ ನಲ್ಲಿ ಮನೆ ಮನೆಗೆ ತೆರಳಿ ಕಾಂಗ್ರೆಸ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ತಿಳಿವಳಿಕೆ ಮೂಡಿಸಬೇಕಿದೆ ಎಂದು ಮಾಜಿ ಶಾಸಕ ವಿ.ಎಸ್‌.ಪಾಟೀಲ ಅವರು ತಿಳಿಸಿದ್ದರು   

ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ನಾಯ್ಕ, ದೀಪಕ್ ದೊಡ್ಡರು, ಕೃಷ್ಣ ಹಿರೇಹಳ್ಳಿ, ಎಮ್‌.ಎನ್ ದುಂಡಸಿ,ಮರಿಯೋಜಿ ರಾವ್, ಗೋಪಾಲ ಪಾಟೀಲ,ರಫೀಕ್ ಇನಾಮಧರ್ ರಜಾ ಎಮ್ ಎಂಕೆ ಬಸವರಾಜ ನಡುವಿನಮನಿ ಮುಂತಾದವರಿದ್ದರು.