ಕೋವಿಡ್ 19 ಹಿನ್ನೆಲೆ: ಸಂಕಷ್ಟದಲ್ಲಿರುವ ಪೋಷಕರಿಗೆ ವಿದ್ಯಾರ್ಥಿ ವೇತನ - ವಿಬ್ ಗಯಾರ್ ಶಿಕ್ಷಣ ಸಂಸ್ಥೆ ತೀರ್ಮಾನ
ಬೆಂಗಳೂರು, ಜೂ 2,ಕೋವಿಡ್ -19 ಸಂಕಷ್ಟ ಸಂದರ್ಭದಲ್ಲಿ ಪೋಷಕರಿಗೆ ಹಣಕಾಸಿನ ನೆರವು ನೀಡಲು ವಿಬ್ ಗಯಾರ್ ಶಿಕ್ಷಣ ಸಂಸ್ಥೆ ಮುಂದಾಗಿದೆ. ಇದಕ್ಕಾಗಿ “ ವಿಬ್ ಗಯಾರ್ ಎಜುಬ್ರಿಡ್ಜ್ ಸ್ಕಾಲರ್ ಶಿಪ್" ಕಾರ್ಯಕ್ರಮ ಆರಂಭಿಸಿದೆ.ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ಪೋಷಕರಿಗೆ ನೆರವು ನೀಡಲು ವಿನೂತನ ರೀತಿಯಲ್ಲಿ ವಿದ್ಯಾರ್ಥಿವೇತನ ಕಾರ್ಯಕ್ರಮ ಪ್ರಾರಂಭಿಸಿದ್ದು, ದೇಶಾದ್ಯಂತ ಇರುವ 38 ಶಾಲೆಗಳಲ್ಲಿ ಈ ಸೌಲಭ್ಯ ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.
ಲಾಕ್ ಡೌನ್ ಸಂಕಷ್ಟಕ್ಕೀಡಾಗಿ ಆರ್ಥಿಕ ತೊಂದರೆ ಎದುರುಸುತ್ತಿರುವ ಪೋಷಕರಿಗೆ ನೆರವು ನೀಡುವುದು ಸಂಸ್ಥೆಯ ಉದ್ದೇಶವಾಗಿದೆ. ವಿಬ್ ಗಯಾರ್ ನ ತಜ್ಞರ ತಂಡ ವಿದ್ಯಾರ್ಥಿವೇತನದ ರೂಪುರೇಷೆಯನ್ನು ವಿನ್ಯಾಸಗೊಳಿಸಿದೆ. ಕೇವಲ ಏಳು ದಿನಗಳಲ್ಲಿ ವಿದ್ಯಾರ್ಥಿವೇತನ ಕಾರ್ಯಕ್ರಮವನ್ನ ಜಾರಿಗೊಳಿಸಿ ಪೋಷಕರಿಗೆ ಬೆಂಬಲ ಮತ್ತು ಸಹಾಯ ನೀಡಲಿದ್ದು, ಇದಕ್ಕಾಗಿ ಪೋಷಕರ ಆರ್ಥಿಕ ಪರಿಸ್ಥಿತಿಯ ಮೌಲ್ಯಮಾಪನ ಮಾಡಿದ ನಂತರ ವಿದ್ಯಾರ್ಥಿವೇತ ವಿತರಿಸಲಾಗುವುದು ಎಂದು ಹೇಳಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 