ಸಮ್ಮೇಳನದ ಪ್ಲೇಕ್ಸ್ ತೆಗೆಯಲು ಸೂಚನೆ: ವಿಚಾರಣೆ ಮುಂದೂಡಿದ ನ್ಯಾಯಾಧೀಶರು
Judge adjourns hearing, orders removal of conference plaques
ದಾಂಡೇಲಿ 11: ದಾಂಡೇಲಿಯಲ್ಲಿ ಅಯೋಜನೆಗೊಂಡಿರುವ 25 ನೇ ಜಿಲ್ಲಾ ಸಾಹಿತ್ಯ ಪ್ಲೇಕ್ಸ್ ಹಾಗೂ ಬ್ಯಾನರ್ ತೆಗೆಯಲು ದಾಂಡೇಲಿ ಜೆಎಂಎಫ್ಸಿ ಕೋರ್ಟ ಸೂಚನೆ ನೀಡಿತು.
ಸಮ್ಮೇಳನಕ್ಕೆ ರಾಜ್ಯ ಅಧ್ಯಕ್ಷರ ಅಥವಾ ಆಡಳಿತಾಧಿಕಾರಿ ಅನುಮತಿ ಪಡೆದಿಲ್ಲ ಹಾಗೂ ರಸ್ತೆಯ ತುಂಬಾ ಸಂಚಾರಕ್ಕೆ ಅಡಚಣೆಯಾಗುವಂತೆ ಫ್ಲೆಕ್ಸ್ , ಕಟೌಟ್ ಹಾಕಲಾಗಿದೆ. ಅಕ್ರಮವಾಗಿ ದೇಣಿಗೆ ಸಂಗ್ರಹಿಸಲಾಗುತ್ತಿದೆ. ಹಾಗಾಗಿ ಸಮ್ಮೇಳನಕ್ಕೆ ತಡೆ ನೀಡಬೇಕೆಂದು ಅಜೀವ ಸದಸ್ಯರಾದ ಅಕ್ರಮ್ ಖಾನ್, ಸಂದೀಪ ಭಂಡಾರಿ , ಪ್ರವೀಣ್ ಕೊಠಾರಿ ದಾವೆ ಹೂಡಿದ್ದರು. ಪ್ರಕರಣ ಗುರುವಾರ ನ್ಯಾಯಾಲಯದ ಮುಂದೆ ವಿಚಾರಣೆಗೆ ಬಂದಿತ್ತು. ಜಿಲ್ಲಾ ಕಸಾಪ ಅಧ್ಯಕ್ಷ ಬೊಮ್ಮಯ್ಯ ಎನ್. ನಾಯಕ (ವಾಸರೆ) ನ್ಯಾಯಾಲಯ ಸಮನ್ಸ ನೀಡುವ ಮುನ್ನವೇ ನ್ಯಾಯಾಧೀಶರ ಎದುರು ತನ್ನ ವಕೀಲರ ಜೊತೆ ಹಾಜರಾಗಿ, ಅರ್ಜಿ ಸಲ್ಲಿಸಲು ಮುಂದಾದರು.
ಇದನ್ನು ಗಮನಿಸಿದ ನ್ಯಾಯಾಲಯ ನಾವು ನೋಟೀಸ್ ಮಾಡದ ಮುನ್ನ ಯಾಕೆ ಬಂದಿರಿ ಎಂದಿತು. ಕಸಾಪ ಜಿಲ್ಲಾಧ್ಯಕ್ಷ ಬೊಮ್ಮಯ್ಯ ನಾಯಕ ಪರ ವಕೀಲರು ನ್ಯಾಯಾಧೀಶರಲ್ಲಿ ತಮ್ಮ ಬೇಡಿಕೆಯ ಮಂಡಿಸಲು ಕೋರ್ಟನಲ್ಲಿ ಮನವಿ ಮಾಡಿದರು. ಈ ವೇಳೆ ಅಜೀವ ಸದಸ್ಯರ ಪರ ವಕೀಲ ರಾಘವೇಂದ್ರ ಗಡೆಪ್ಪನವರ ಸಮರ್ಥವಾಗಿ ವಾದ ಮಂಡಿಸಿದರು. ಕಸಾಪ ಬೈಲಾ ಮತ್ತು ಅಧ್ಯಕ್ಷರ ಅನುಮತಿ ಅಗತ್ಯ ಎಂದು ಪ್ರತಿಪಾದಿಸಿದರು. ವಾದ ಆಲಿಸಿದ ನ್ಯಾಯಾಲಯ ತಕ್ಷಣ ಫ್ಲೆಕ್ಸ್ ತೆಗೆಯುವಂತೆ ಕಸಾಪ ಜಿಲ್ಲಾಧ್ಯಕ್ಷ ಬೊಮ್ಮಯ್ಯ ಎನ್.ನಾಯಕ (ವಾಸರೆ)ಗೆ ಸೂಚಿಸಿತು. ಇಲ್ಲದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು . ನಂತರ ಪ್ರಕರಣದ ವಿಚಾರಣೆಯನ್ನು ನಾಳೆ ಶುಕ್ರವಾರಕ್ಕೆ ಮುಂದೂಡಲಾಯಿತು.
ಉತ್ತರ ಕನ್ನಡ ಜಿಲ್ಲಾ 25 ನೇ ಸಮ್ಮೇಳನ ನಡೆಯುವದೇ ಎಂಬ ಆತಂಕ ಜಿಲ್ಲಾ ಕಸಾಪವನ್ನು ಕಾಡುತ್ತಿದ್ದು, ಜಿಲ್ಲೆಯ ಜನ ಈ ವಿದ್ಯಾಮಾನವನ್ನು ಕುತೂಹಲದಿಂದ ಗಮನಿಸುತ್ತಿರುವುದಂತೂ ಭಾರೀ ಸುದ್ದಿಯಾಗಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 