ಜಯದೇವ ಹಿರೇಮಠರಿಗೆ ಥೇಮ್ಸ್ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯದ ವೃತ್ತಿಪರ ಡಾಕ್ಟರೇಟ್
Jayadev Hiremath Honored with Professional Doctorate by Thames International University
ಧಾರವಾಡ, ಆ. 19: ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ಕ್ಷೇತ್ರದಲ್ಲಿ ಸಲ್ಲಿಸಿರುವ ವಿಶಿಷ್ಟ ಸೇವೆ ಮತ್ತು ಜೀವಮಾನ ಸಾಧನೆಯನ್ನು ಪರಿಗಣಿಸಿ ನಗರದ ಜಯದೇವ ಪಂಚಾಕ್ಷರಿ ಹಿರೇಮಠ ಅವರಿಗೆ ಫ್ರಾನ್ಸ್ನ ಥೇಮ್ಸ್ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯವು ವೃತ್ತಿಪರ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರದಲ್ಲಿನ ಅಚಲ ಬದ್ಧತೆ, ಅಪಾರ ಅನುಭವ, ಗಮನಾರ್ಹ ಸಾಧನೆಗಳು ಹಾಗೂ ನವೀನ ಕೊಡುಗೆಗಳನ್ನು ಪರಿಗಣಿಸಿ ಜಯದೇವ ಹಿರೇಮಠ ಅವರನ್ನು ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ.
ಭಾರತ, ಕುವೈತ್ ಹಾಗೂ ದುಬೈನಲ್ಲಿ ಗ್ರಂಥಾಲಯ ವ್ಯವಸ್ಥೆ ಮತ್ತು ವಿದ್ಯಾರ್ಥಿಗಳ ಅಧ್ಯಯನಕ್ಕೆ ಗ್ರಂಥಾಲಯಗಳ ಪರಿಣಾಮಕಾರಿ ಬಳಕೆಯ ಕುರಿತು ಅವರು ಅಪಾರ ಅನುಭವ ಹೊಂದಿದ್ದಾರೆ. ಕರ್ನಾಟಕ ಕಾನೂನು ವಿಶ್ವವಿದ್ಯಾಲಯ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆ, ಭೋಪಾಲ್ನ ಬ್ರಿಟಿಷ್ ಕೌನ್ಸಿಲ್ ಗ್ರಂಥಾಲಯ, ಮುಂಬೈನ ಯುನಿಟ್ ಟ್ರಸ್ಟ್ ಆಫ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಕ್ಯಾಪಿಟಲ್ ಮಾರ್ಕೆಟ್ ಹಾಗೂ ನವದೆಹಲಿಯ ನ್ಯಾಷನಲ್ ಕೌನ್ಸಿಲ್ ಫಾರ್ ಸಿಮೆಂಟ್ ಆ್ಯಂಡ್ ಬಿಲ್ಡಿಂಗ್ ಮೆಟೀರಿಯಲ್ಸ್ ಸಂಸ್ಥೆಗಳಲ್ಲಿ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿದ್ದಾರೆ.
ಕುವೈತ್ನ ಸೆಂಟ್ರಲ್ ಬ್ಯಾಂಕಿಂಗ್ ಸ್ಟಡೀಸ್ ಸಂಸ್ಥೆ, ಅಮೆರಿಕನ್ ಯೂನಿವರ್ಸಿಟಿ ಆಫ್ ಕುವೈತ್ ಹಾಗೂ ಇಂಡಸ್ಟ್ರಿಯಲ್ ಬ್ಯಾಂಕ್, ದುಬೈನ ಬಿಐಟಿಎಸ್ ಪಿಲಾನಿ ವಿಶ್ವವಿದ್ಯಾಲಯದ ಗ್ರಂಥಾಲಯಗಳನ್ನು ನವೀನ ವಿನ್ಯಾಸ ಮತ್ತು ಮಾಹಿತಿ ವಿಜ್ಞಾನದ ತಂತ್ರಜ್ಞಾನಗಳೊಂದಿಗೆ ಆಧುನೀಕರಣಗೊಳಿಸುವಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದಾರೆ.
ಭಾರತೀಯ ಗ್ರಂಥಾಲಯಗಳ ಸಂಘ, ಇಂಡಿಯನ್ ಅಸೋಸಿಯೇಷನ್ ಆಫ್ ಸ್ಪೆಷಲ್ ಲೈಬ್ರರೀಸ್ ಆ್ಯಂಡ್ ಇನ್ಫಾರ್ಮೇಷನ್ ಸೆಂಟರ್ಸ್, ಅಮೆರಿಕನ್ ಸ್ಪೆಷಲ್ ಲೈಬ್ರರೀಸ್ ಅಸೋಸಿಯೇಷನ್ ಹಾಗೂ ಇಂಗ್ಲೆಂಡ್ನ ವಿಶೇಷ ಗ್ರಂಥಾಲಯಗಳು ಮತ್ತು ಮಾಹಿತಿ ವಿನಿಮಯ ಕೇಂದ್ರಗಳ ಸಂಘದ ಆಜೀವ ಸದಸ್ಯರಾಗಿದ್ದಾರೆ. ಅಲ್ಲದೆ, ಭಾರತದ ಹಲವು ಸಲಹಾ ಮಂಡಳಿಗಳ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕನ್ನಡ ವಾಙ್ಮಯ ಲೋಕದ ಹಿರಿಯ ವಿದ್ವಾಂಸ ಡಾ. ಪಂಚಾಕ್ಷರಿ ಹಿರೇಮಠ ಅವರ ಹಿರಿಯ ಪುತ್ರರಾಗಿರುವ ಜಯದೇವ ಹಿರೇಮಠ ಅವರಿಗೆ ಇತ್ತೀಚೆಗೆ ಮುಂಬೈನಲ್ಲಿ ನಡೆದ ಥೇಮ್ಸ್ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ವೃತ್ತಿಪರ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.
ಗ್ರಂಥಾಲಯ ಮತ್ತು ಮಾಹಿತಿ ನಿರ್ವಹಣೆಯಲ್ಲಿನ ಶ್ರೇಷ್ಠತೆಗಾಗಿ ಅವರಿಗೆ ಈಗಾಗಲೇ ಏಷ್ಯನ್ ಲೀಡರ್ಶಿಪ್ ಆ್ಯಂಡ್ ಟೀಚರ್ಸ್ ಪ್ರಶಸ್ತಿಯೂ ಲಭಿಸಿದೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 