AI ಹೂಡಿಕೆ, ಅಳವಡಿಕೆ ಮತ್ತು ಉದ್ಯೋಗಿಗಳ ಸಿದ್ಧತೆಯಲ್ಲಿ ಭಾರತ APACನಲ್ಲಿ ಮುಂಚೂಣಿ: ಆಟೋಡೆಸ್ಕ್ ವರದಿ
India Leads APAC in AI Investment, Adoption and Workforce Readiness: Autodesk Report
ಬೆಂಗಳೂರು, ಆ. 20 : ಏಷ್ಯಾ-ಪೆಸಿಫಿಕ್ (APAC) ಪ್ರದೇಶದಲ್ಲಿ ಕೃತಕ ಬುದ್ಧಿಮತ್ತೆ (AI) ಕ್ಷೇತ್ರದ ಪ್ರಮುಖ ಶಕ್ತಿಯಾಗಿ ಭಾರತ ವೇಗವಾಗಿ ಹೊರಹೊಮ್ಮುತ್ತಿದೆ. AI ಹೂಡಿಕೆ, ಉದ್ಯಮಗಳಲ್ಲಿನ ಅಳವಡಿಕೆ ಮತ್ತು ಉದ್ಯೋಗಿಗಳ ಸಿದ್ಧತೆಯಲ್ಲಿ ಭಾರತ ತನ್ನ ಸಮೀಪದ ದೇಶಗಳನ್ನು ಹಿಂದಿಕ್ಕಿದೆ ಎಂದು ಗುರುವಾರ ಬಿಡುಗಡೆಯಾದ ಆಟೋಡೆಸ್ಕ್ AI ಪಲ್ಸ್ ವರದಿ-2026 ತಿಳಿಸಿದೆ.
ಮುಂಬೈನಲ್ಲಿ ನಡೆದ ಆಟೋಡೆಸ್ಕ್ ಡಿಸೈನ್ & ಮೇಕ್ ಸಮಿಟ್ ಇಂಡಿಯಾದಲ್ಲಿ ವರದಿ ಬಿಡುಗಡೆಯಾಯಿತು. ಕಳೆದ ಒಂದು ವರ್ಷದಲ್ಲಿ 91 ಪ್ರತಿಶತ ಭಾರತೀಯ ಸಂಸ್ಥೆಗಳು AI ಹೂಡಿಕೆಯನ್ನು ಹೆಚ್ಚಿಸಿವೆ. ಇದು APAC ಸರಾಸರಿ ಶೇ. 85 ಮತ್ತು ಜಾಗತಿಕ ಸರಾಸರಿ ಶೇ. 81ಕ್ಕಿಂತ ಹೆಚ್ಚಾಗಿದೆ.
ಭಾರತದಲ್ಲಿ AI ಸಹಾಯಕರು ಮತ್ತು ಚಾಟ್ಬಾಟ್ಗಳ ಬಳಕೆಯೂ APACನಲ್ಲಿ ಅತ್ಯಧಿಕವಾಗಿದ್ದು, 63 ಪ್ರತಿಶತ ಸಂಸ್ಥೆಗಳು ಇಂತಹ AI ಸಾಧನಗಳನ್ನು ಬಳಸುತ್ತಿವೆ. ಸಮೀಕ್ಷೆಗೆ ಒಳಪಟ್ಟ ಯಾವುದೇ ಭಾರತೀಯ ಸಂಸ್ಥೆಯೂ AI ಸಾಧನಗಳಿಲ್ಲದೆ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಗಮನಾರ್ಹ ಅಂಶವಾಗಿದೆ.
ಹೆಚ್ಚಿದ AI ಹೂಡಿಕೆಗಳು ವ್ಯವಹಾರದಲ್ಲಿ ಸ್ಪಷ್ಟ ಪ್ರಯೋಜನಗಳನ್ನು ನೀಡುತ್ತಿವೆ. ಸುಮಾರು 88 ಪ್ರತಿಶತ ಭಾರತೀಯ ಪ್ರತಿಕ್ರಿಯಾತ್ಮಕರು ಉತ್ಪಾದಕತೆ ಹೆಚ್ಚಾಗಿದೆ, ಶೇ. 84ರಷ್ಟು ಮಂದಿ ಹೊಸತನದಲ್ಲಿ ಸುಧಾರಣೆಯಾಗಿದೆ ಮತ್ತು ಶೇ. 75ರಷ್ಟು ಮಂದಿ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಬಲಗೊಂಡಿದೆ ಎಂದು ಹೇಳಿದ್ದಾರೆ.
ಜನರೇಟಿವ್ AI ಭಾರತೀಯ ಸಂಸ್ಥೆಗಳ ಪ್ರಮುಖ ಹೂಡಿಕೆ ಆದ್ಯತೆಯಾಗಿದ್ದು, 74 ಪ್ರತಿಶತ ಸಂಸ್ಥೆಗಳು ಈ ಕ್ಷೇತ್ರದಲ್ಲಿ ಹೂಡಿಕೆ ಮಾಡುತ್ತಿವೆ. ನಂತರದ ಸ್ಥಾನದಲ್ಲಿ ಪ್ರಕ್ರಿಯೆ ಸ್ವಯಂಚಾಲಿತಗೊಳಿಸುವಿಕೆ ಶೇ. 58 ಮತ್ತು ನಿರ್ಧಾರ ಬೆಂಬಲ AI ಶೇ. 54ರಷ್ಟಿದೆ. AI ಏಜೆಂಟ್ಗಳಲ್ಲಿ ಹೂಡಿಕೆ ಈಗಾಗಲೇ ಶೇ. 51ರಷ್ಟು ಸಂಸ್ಥೆಗಳ ಆದ್ಯತೆಯಾಗಿದ್ದು, ಮುಂದಿನ ಒಂದು ವರ್ಷದೊಳಗೆ 69 ಪ್ರತಿಶತ ಸಂಸ್ಥೆಗಳು ಏಜೆಂಟಿಕ್ AI ಅಳವಡಿಸಿಕೊಳ್ಳುವ ನಿರೀಕ್ಷೆಯಿದೆ.
ಈ ಬೆಳವಣಿಗೆಗಳು AI ಅನ್ನು ಕೇವಲ ಪ್ರಯೋಗಾತ್ಮಕ ತಂತ್ರಜ್ಞಾನವಾಗಿ ನೋಡುವ ಬದಲು, ಪ್ರಮುಖ ವ್ಯವಹಾರ ಸಾಮರ್ಥ್ಯವಾಗಿ ಪರಿಗಣಿಸುವತ್ತ ಸಂಸ್ಥೆಗಳು ಸಾಗುತ್ತಿರುವುದನ್ನು ಸೂಚಿಸುತ್ತವೆ.
"ಭಾರತದ ವೇಗದ AI ಅಳವಡಿಕೆ ಕೇವಲ ತಂತ್ರಜ್ಞಾನ ಬಳಕೆಯನ್ನು ಪ್ರತಿಬಿಂಬಿಸುವುದಿಲ್ಲ. ಇದು ಜಾಗತಿಕ ನಾವೀನ್ಯತೆ ಮತ್ತು ಎಂಜಿನಿಯರಿಂಗ್ ಶಕ್ತಿಯಾಗಿ ಭಾರತದ ಬೆಳೆಯುತ್ತಿರುವ ನಾಯಕತ್ವವನ್ನು ಸೂಚಿಸುತ್ತದೆ," ಎಂದು ಆಟೋಡೆಸ್ಕ್ನ APAC ಮತ್ತು ಜಪಾನ್ನ ಉಪಾಧ್ಯಕ್ಷ ಹರೆಶ್ ಕೂಬ್ಚಂದಾನಿ ಹೇಳಿದರು.
ವಿಕಸಿತ ಭಾರತ (Viksit Bharat) ಗುರಿಯತ್ತ ಸಾಗುತ್ತಿರುವ ಸಂದರ್ಭದಲ್ಲಿ ಮೂಲಸೌಕರ್ಯ, ಉತ್ಪಾದನೆ, ವಾಸ್ತುಶಿಲ್ಪ ಮತ್ತು ನಿರ್ಮಾಣ ಕ್ಷೇತ್ರಗಳಲ್ಲಿ ವಿನ್ಯಾಸ ನಾವೀನ್ಯತೆ, ಉತ್ಪಾದಕತೆ ಮತ್ತು ಸ್ಥಿರತೆಯನ್ನು ಹೆಚ್ಚಿಸುವಲ್ಲಿ AI ಪ್ರಮುಖ ತಂತ್ರಜ್ಞಾನವಾಗಿ ಹೊರಹೊಮ್ಮುತ್ತಿದೆ ಎಂದು ಅವರು ಹೇಳಿದರು.
AI ಕ್ಷೇತ್ರದಲ್ಲಿ ಭಾರತದ ಬಲ ಹೂಡಿಕೆಗೆ ಮಾತ್ರ ಸೀಮಿತವಾಗಿಲ್ಲ. 70 ಪ್ರತಿಶತ ಭಾರತೀಯ ಪ್ರತಿಕ್ರಿಯಾತ್ಮಕರು ತಮ್ಮ ಸಂಸ್ಥೆಗಳು ಸೂಕ್ತ AI ತರಬೇತಿ ನೀಡುತ್ತಿವೆ ಎಂದು ಹೇಳಿದ್ದಾರೆ. APACನಲ್ಲಿ ಈ ಪ್ರಮಾಣ ಶೇ. 57 ಮತ್ತು ಜಾಗತಿಕವಾಗಿ ಶೇ. 59ರಷ್ಟಿದೆ.
AI ಅಳವಡಿಕೆಗೆ ಉನ್ನತ ಆಡಳಿತ ಮಂಡಳಿಗಳ ಬೆಂಬಲವೂ ಭಾರತದಲ್ಲಿ ಹೆಚ್ಚಾಗಿದೆ. ಶೇ. 88ರಷ್ಟು ಮಂದಿ ಹಿರಿಯ ಅಧಿಕಾರಿಗಳು AI ಅಳವಡಿಕೆಯನ್ನು ಸಕ್ರಿಯವಾಗಿ ಉತ್ತೇಜಿಸುತ್ತಿದ್ದಾರೆ ಎಂದು ಹೇಳಿದ್ದಾರೆ. APACನಲ್ಲಿ ಈ ಪ್ರಮಾಣ ಶೇ. 81ರಷ್ಟಿದೆ.
ಆದಾಗ್ಯೂ, ದೊಡ್ಡ ಪ್ರಮಾಣದಲ್ಲಿ AI ಅಳವಡಿಸುವ ಸಂದರ್ಭದಲ್ಲಿ ಕೆಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದು ವರದಿ ಎಚ್ಚರಿಸಿದೆ. ನಿಯಂತ್ರಣಾತ್ಮಕ ಅನಿಶ್ಚಿತತೆ ಶೇ. 50ರಷ್ಟು ಮಂದಿಗೆ ಪ್ರಮುಖ ಸವಾಲಾಗಿದ್ದು, AI ಕೌಶಲ್ಯದ ಕೊರತೆ ಶೇ. 49, ವ್ಯವಸ್ಥೆಗಳ ಏಕೀಕರಣ ಶೇ. 47 ಮತ್ತು ದತ್ತಾಂಶದ ಗುಣಮಟ್ಟ ಶೇ. 45ರಷ್ಟಿದೆ.
AI ಬಳಕೆಯ ಸಂದರ್ಭದಲ್ಲಿ ವ್ಯವಹಾರಿಕ ದತ್ತಾಂಶವನ್ನು ರಕ್ಷಿಸುವ ಸಾಮರ್ಥ್ಯದ ಬಗ್ಗೆ ಭಾರತದಲ್ಲೇ ಅತ್ಯಧಿಕ ವಿಶ್ವಾಸ ವ್ಯಕ್ತವಾಗಿದೆ. 93 ಪ್ರತಿಶತ ಪ್ರತಿಕ್ರಿಯಾತ್ಮಕರು ತಮ್ಮ ಸಂಸ್ಥೆಗಳು ದತ್ತಾಂಶವನ್ನು ಸುರಕ್ಷಿತವಾಗಿರಿಸಬಲ್ಲವು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದಲ್ಲದೆ, ಸಮೀಕ್ಷೆಯಲ್ಲಿ ಭಾರತವು ಹೊಸ ಮಾರುಕಟ್ಟೆ ವಿಸ್ತರಣೆಯಲ್ಲಿಯೂ ಮುಂಚೂಣಿಯಲ್ಲಿದೆ. 87 ಪ್ರತಿಶತ ಪ್ರತಿಕ್ರಿಯಾತ್ಮಕರು ತಮ್ಮ ಸಂಸ್ಥೆಗಳು ಹೊಸ ಮಾರುಕಟ್ಟೆಗಳನ್ನು ಸಕ್ರಿಯವಾಗಿ ಅನ್ವೇಷಿಸುತ್ತಿವೆ ಎಂದು ತಿಳಿಸಿದ್ದಾರೆ.
2026ರ ಜನವರಿ ಮತ್ತು ಫೆಬ್ರವರಿಯಲ್ಲಿ ಸ್ಟಾಟಿಸ್ಟಾ ಪ್ಲಸ್ ರಿಸರ್ಚ್ ನಡೆಸಿದ AI ಪಲ್ಸ್ ಸಮೀಕ್ಷೆಯನ್ನು ಆಧರಿಸಿ ವರದಿ ಸಿದ್ಧಪಡಿಸಲಾಗಿದೆ. 18 ಮಾರುಕಟ್ಟೆಗಳಲ್ಲಿ ವಾಸ್ತುಶಿಲ್ಪ, ಎಂಜಿನಿಯರಿಂಗ್, ನಿರ್ಮಾಣ ಮತ್ತು ಕಾರ್ಯಾಚರಣೆ, ಉತ್ಪನ್ನ ವಿನ್ಯಾಸ ಮತ್ತು ಉತ್ಪಾದನೆ ಹಾಗೂ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರಗಳ 2,500 ಉದ್ಯಮ ನಾಯಕರು ಮತ್ತು ತಜ್ಞರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು.
ಭಾರತದ AI ಪಯಣ ಇದೀಗ ಹೊಸ ಹಂತ ಪ್ರವೇಶಿಸುತ್ತಿದ್ದು, ತಂತ್ರಜ್ಞಾನದ ಪ್ರಯೋಗದಿಂದ ಮುಂದೆ ಸಾಗಿರುವ ದೇಶವು ಉತ್ಪಾದಕತೆ, ನಾವೀನ್ಯತೆ, ಪ್ರತಿಭಾ ಅಭಿವೃದ್ಧಿ ಮತ್ತು ಜಾಗತಿಕ ವ್ಯವಹಾರ ವಿಸ್ತರಣೆಯನ್ನು ರೂಪಾಂತರಿಸಲು AIಯನ್ನು ಬಳಸುವತ್ತ ಹೆಜ್ಜೆ ಇಡುತ್ತಿದೆ ಎಂದು ವರದಿ ತಿಳಿಸಿದೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 