ಸಮರ್ಥ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ಸಂಘ ನಿ. ಶಾಖೆ ಉದ್ಘಾಟನೆ
Inauguration of the branch of the Samartha Multipurpose Friendly Cooperative Society
ಸಮರ್ಥ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ಸಂಘ ನಿ. ಶಾಖೆ ಉದ್ಘಾಟನೆ
ಯರಗಟ್ಟಿ, 02 ;ಸದೃಢ ಸಮಾಜ ನಿರ್ಮಾಣಕ್ಕೆ ಸಹಕಾರ ಸಂಘಗಳ ಪಾತ್ರ ಅಮೂಲ್ಯವಾದದ್ದು. ಇಂತಹ ಸಹಕಾರಿ ತತ್ವದ ಮೂಲಕ ಸಂಘ, ಸಂಸ್ಥೆಗಳು ಸಮಾಜಮುಖಿ ಕಾರ್ಯಗಳಲ್ಲಿ ನಿರತವಾಗಿವೆ. ಪ್ರತಿ ಸಂಘ-ಸಂಸ್ಥೆಗಳ ಗುರಿ, ಉದ್ದೇಶಗಳನ್ನು ಅರಿಯುವ ಮೂಲಕ ಕಾರ್ಯಗತರಾಬೇಕು. ಕೂಲಿ ಕಾರ್ಮಿಕರ ಆರ್ಥಿಕ ಗುಣಮಟ್ಟ ಹೆಚ್ಚಿಸಲು ಸಾದ್ಯವಿದೆ. ಅದರಿಂದಾಗಿ ಸಹಕಾರ ಸಂಘಟನೆಗಳು ಪ್ರಬಲವಾಗಿ ಬೆಳೆಯಲು ಸಹಕಾರಿಯಾಗುತ್ತವೆ. ಸಹಕಾರಿ ಸಂಘಗಳು ಸದೃಢವಾಗಿ ಬೆಳೆಯಲು ಪ್ರತಿಯೊಬ್ಬರ ಸಹಕಾರ ಮುಖ್ಯ ಎಂದು ಜಿ.ಎಸ್. ಬಿಜಗುಪ್ಪಿಯವರು ಮಾತನಾಡಿದರು.
ಸಮೀಪದ ಮುಗಳಿಹಾಳ ಗ್ರಾಮದಲ್ಲಿ ಸಮರ್ಥ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ಸಂಘ ನಿ.ಮೂಡಲಗಿ ಇವರ ಪ್ರಥಮ ಶಾಖೆಯನ್ನು ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ದಿವ್ಯಸಾನಿದ್ಯ ಶ್ರೀ ಸೋಮಾನಂದ ಭಾರತಿ ಮಹಾಸ್ವಾಮಿಗಳು ಶ್ರೀ ಸಿದ್ಧಾರೂಢ ಮಠ ಮುಗಳಿಹಾಳ, ಸಮರ್ಥ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ಸಂಘ ನಿ.. ಮೂಡಲಗಿ ಅಧ್ಯಕ್ಷರಾದಶ್ರೀ ದಾನಯ್ಯಾ ಶಿ. ಹಿರೇಮಠ, ಉಪಾಧ್ಯಕ್ಷರಾದ ಮಹಾಂತೇಶ ಕ. ಅಂಗಡಿ ಹಾಗೂ ಮುಗಳಿಹಾಳ ಶಾಖಾ ಸಲಹಾ ಸಮಿತಿ ಅಧ್ಯಕ್ಷರಾದ ರಾಮನಗೌಡ ಭೀ. ಗಂಗರಡ್ಡಿ, ಉಪಾಧ್ಯಕ್ಷರಾದ ಹಣಮಂತ ಅ. ದಳವಾಯಿ, ಶಿವಲಿಂಗಪ್ಪ ರಾ. ಅಕ್ಕಿಸಾಗರ, ಬಸಪ್ಪ ಫ. ಬಿ.ಪಾಟೀಲ, ವಿಠ್ಠಲ ಸಿ. ಹಾದಿಮನಿ, ಮುತ್ತೆಪ್ಪ ಪುಂ. ಕುರಿ, ಬಸವರಾಜ ಸಿ. ಬೆಲ್ಲದ, ಲಕ್ಷ್ಮಣಗೌಡ ವೆಂ. ಪಾಟೀಲ, ಮಹಾವೀರ ಬಾ. ಪೂಜೇರ, ಸುರೇಶ ಬ. ಕಡಕೋಳ, ವಿಜಯ ಕ. ಕುಲಗೋಡ, ಸಿದ್ದನಗೌಡ ಮ. ಪಾಟೀಲ, ಹಾಗೂ ಪ್ರಧಾನ ಕಚೇರಿಯ ಎಲ್ಲ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರು ಮತ್ತಿತರರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 