21ರಂದು ಕಪ್ಪತ್ತಗುಡ್ಡದ ಬಸವ ಯೋಗಾಶ್ರಮ ಬಸವಬೆಟ್ಟ ಆಶ್ರಮದ ಲೋಕಾರ್ಪಣೆ

ಶಿರಹಟ್ಟಿ 15: ತಾಲೂಕಿನ ಕಡಕೋಳ ಗ್ರಾಮದ ಸಮೀಪದ ಕಪ್ಪತಗುಡ್ಡದಲ್ಲಿ ಸ್ಥಾಪಿಸಲಾದ ಶ್ರೀ ಬಸವ ಯೋಗಾಶ್ರಮದ ಲೋಕಾರೆ​‍್ಣ ಕಾರ್ಯಕ್ರಮವು ಇದೇ ಏಪ್ರಿಲ್ 21ರ ರವಿವಾರದಿಂದ ಏಪ್ರಿಲ್ 22ರ ಸೋಮವಾರದವರೆಗೆ ನಡೆಯಲಿದೆ. 

21ರ ರವಿವಾರದಂದು ಬೆಳಗ್ಗೆ 8 ಗಂಟೆಗೆ ಶಟಸ್ಥಲ ಧ್ವಜಾರೋಹಣ, 09 ಗಂಟೆಗೆ ಸಾಮೂಹಿಕ ಇಷ್ಟಲಿಂಗ ಪೂಜಾ ಕಾರ್ಯಕ್ರಮ ಹಾಗೂ 11ಗಂಟೆಗೆ ರಾಜ್ಯಮಟ್ಟದ ಯೋಗ ಸಮ್ಮೇಳನ ಪ್ರದರ್ಶನ ಜೊತೆಗೆ ದಾನಿಗಳಿಗೆ, ಯೋಗ ಸಾಧಕರಿಗೆ ಸನ್ಮಾನ ಕಾರ್ಯಕ್ರಮ, ಸಾಯಂಕಾಲ 04. ಗಂಟೆಗೆ ಸ್ವಾಮಿ ವಿವೇಕಾನಂದ ಯೋಗ ಮತ್ತು ಮಲ್ಲಕಂಬ ತರಬೇತಿ ಕೇಂದ್ರ ಶಿರಗುಪ್ಪಿ ಅವರಿಂದ ಮಲ್ಲಕಂಬ ಪ್ರದರ್ಶನ, ಸಾಯಂಕಾಲ 5 ಗಂಟೆಗೆ ವಚನ ರಥೋತ್ಸವ ಕಾರ್ಯಕ್ರಮ ಜರುಗುವುದು. 

22ರ ಸೋಮವಾರದಂದು ಮಧ್ಯಾಹ್ನ 12:30 ಗಂಟೆಗೆ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಜರಗುವವು, ಮಧ್ಯಾಹ್ನ 3 ಗಂಟೆಗೆ ಕೃಷಿ ಸಮ್ಮೇಳನ ಜೊತೆಗೆ ಗೋ ಉತ್ಪನ್ನಗಳ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ, ಕೃಷಿಕರಿಗೆ ಸನ್ಮಾನ ಕಾರ್ಯಕ್ರಮ, ಸಾಯಂಕಾಲ 5 ಗಂಟೆಗೆ ಕಡುಬಿನ ಕಾಳಗ ಕಾರ್ಯಕ್ರಮ ಜರಗುವುದು. 

ಕಾರಣ ಸಕಲ ಭಕ್ತಾದಿಗಳು ಈ ಎರಡು ದಿನಗಳ ಕಾಲ ನಡೆಯುವ ಮಹಾರಥೋತ್ಸವ, ಕಡಬಿನ ಕಾಳಗ ಕಾರ್ಯಕ್ರಮ, ಮಲ್ಲಕಂಬ ಪ್ರದರ್ಶನ ಹಾಗೂ ಕೃಷಿ ಸಮ್ಮೇಳನ ಕಾರ್ಯಕ್ರಮಕ್ಕೆ ಆಗಮಿಸಿ ಶೋಭೆ ತರಬೇಕೆಂದು ಯೋಗಾಶ್ರಮ ಸಮಿತಿಯ ಮುಖ್ಯಸ್ಥರಾದ ವೀರೇಶ ಗುರೂಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.