ಸಮಾಜಕ್ಕೆ ಮಾನವನ ಕೊಡುಗೆ ಅತಿ ಮುಖ್ಯ: ಗಣೇಶ್

ಗಂಗಾವತಿ 11: ತಾಲೂಕಿನಲ್ಲಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ - ಪ್ರತಿಭಾ ಸಂಭ್ರಮ ಕಾರ್ಯಕ್ರಮವನ್ನು, ಗಂಗಾವತಿ ನಗರದ  ಶ್ರೀಚನ್ನಬಸವ ಕಲಾ ಮಂದಿರದಲ್ಲಿ   ಹಮ್ಮಿಕೊಳ್ಳಲಾಯಿತು. 

ಕಾರ್ಯಕ್ರಮವನ್ನು  ಕಲ್ಯಾಣ ಕರ್ನಾಟಕ  ಕೊಪ್ಪಳ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಗಣೇಶ್ ರವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಕಣಜಕ್ಕೆ, ಭತ್ತವನ್ನು ಸುರಿಯುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ,  ಜ್ಞಾನ ವಿಕಾಸ ಕಾರ್ಯಕ್ರಮ ಬೆಳೆದು ಬಂದ ಬಗ್ಗೆ, ಕೌಟುಂಬಿಕ ಸಾಮರಸ್ಯದಲ್ಲಿ ಮಹಿಳೆಯ ಪಾತ್ರ, ಅತ್ತೆ, ಸೊಸೆ ಮತ್ತು ತಾಯಿ  ಮಗಳ ಸಾಮರಸ್ಯದ  ಬಗ್ಗೆ ಬಹಳ ಮಾರ್ಮಿಕವಾಗಿ  ಮಾಹಿತಿ ನೀಡಿದರು.ಜನನ, ಜೀವನ, ಮರಣದ  ಆಗು ಹೋಗುಗಳ ಮದ್ಯೆ ಮನುಷ್ಯ ಸಮಾಜಕ್ಕೆ ನೀಡಬೇಕಾದ ಕೊಡುಗೆಗಳ ಬಗ್ಗೆ, ತುಂಬಾಅರ್ಥಗರ್ಭಿತವಾದ   ಮಾಹಿತಿ ನೀಡಿದರು.ತಾಲೂಕಿನಲ್ಲಿ ಕಳೆದ 12 ವರ್ಷದ ಅವಧಿಯಲ್ಲಿ ಮೂಡಿ ಬಂದ  ಯೋಜನೆಯ  ವಿವಿಧ ಕಾರ್ಯಕ್ರಮಗಳ ಬಗ್ಗೆ ಬೆಳಕು ಚೆಲ್ಲಿದರು.ಮತ್ತು ಕಾರ್ಯಕ್ರಮಕ್ಕೆ  ಜೊತೆಯಾಗಿ ಬಂದಿರುವ ಅತ್ತೆ -ಸೊಸೆಯಂದಿರನ್ನುವಿಶೇಷವಾಗಿ ಗುರುತಿಸಿ ಅಭಿನಂದಿಸಿದರು.ಈ ಸಂದರ್ಭದಲ್ಲಿ ಗಂಗಾವತಿ ಉಪವಿಭಾಗ ಆಸ್ಪತ್ರೆ ಮುಖ್ಯ ವೈದ್ಯಾ ಧಿಕಾರಿ  ಡಾ, ಈಶ್ವರ ಶಿ, ಸವಡಿ, ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ, ಸಹಾಯಕ ಸಬ್‌ಇನ್ಸ್‌ ಪೆಕ್ಟರ್  ಕಲಾವತಿ, ಸರಕಾರಿ ಪದವಿ ಪೂರ್ವ ಕಾಲೇಜು ಗಂಗಾವತಿ ಉಪನ್ಯಾಸಕರಾದ, ಲಲಿತ ಕಂದಗಲ್, ವಿದ್ಯಾನಿಕೇತನ ಪದವಿ ಕಾಲೇಜ್ ನ ಕನ್ನಡ ಪ್ರಾಧ್ಯಪಕರಾದ ರಾಜೇಶ್ವರಿ ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ,  ಪಲ್ಲವಿ, ಆಪ್ತ ಸಮಾಲೋಚಕಿ ಉಪ ವಿಭಾಗ ಆಸ್ಪತ್ರೆ ಇವರು  ದುಶ್ಚಟ ಮುಕ್ತ ಸಮಾಜ ನಿರ್ಮಾಣದಲ್ಲಿ  ಮಹಿಳೆಯರ ಪಾತ್ರ ಕುರಿತು ಉತ್ತಮ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆನೆಗೊಂದಿ ರಾಜವಂಶಸ್ಥ ಲಲಿತಾ ರಾಣಿ, ರಂಗದೇವರಾಯಲು ಇವರು ವಹಿಸಿದ್ದರು.  

ಕಾರ್ಯಕ್ರಮದಲ್ಲಿ ಜಿಲ್ಲಾ  ಜನಜಾಗೃತಿ ಸದಸ್ಯ ನೀಲಕಂಠಪ್ಪ ನಾಗಶೆಟ್ಟಿ, ಸತ್ಯನಾರಾಯಣ, ಚೆನ್ನವೀರ ಗೌಡ, ಆರಾಳ, ತಾಲೂಕಿನ ಯೋಜನಾಧಿಕಾರಿ ಬಾಲಕೃಷ್ಣ, ಸಮನ್ವಯಧಿಕಾರಿ  ಶಾರದ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ  ತಾಲೂಕಿನ 5 ಮಂದಿ  ಮಹಿಳಾ ಸಾಧಕರನ್ನು, ಮತ್ತು ಉತ್ತಮವಾದ ಜ್ಞಾನ ವಿಕಾಸ ಕೇಂದ್ರಗಳನ್ನುನಿರ್ವಹಣೆ ಮಾಡುತ್ತಿರುವ ಕೇಂದ್ರಗಳನ್ನು ಗುರುತಿಸಲಾಯಿತು.  ಕಾರ್ಯಕ್ರಮದ ಬಳಿಕ  ಸದಸ್ಯರಿಂದ ವಿವಿಧ ಮನೋರಂಜನೆ ಕಾರ್ಯಕ್ರಮಗಳು ಜರುಗಿದವು.