ಲಾರಿ ಚಾಲಕರ, ನಿರ್ವಾಹಕರ ಆರೋಗ್ಯ ಶಿಬಿರ
Health Camp for Lorry Drivers and Cleaners
ಲೋಕದರ್ಶನ ವರದಿ
ದಾಂಡೇಲಿ 06: ಟ್ರಾನ್ಸೊ-್ಪರ್ಟ್ ಆಪರೇಟರ್ಸ ಅಸೋಸಿಯೇಶನ್ ಮತ್ತು ಎಕಲ್ ಅಭಿಯಾನ ಸಂಸ್ಥೆಯ ಆಶ್ರಯದಡಿ ಹಳಿಯಾಳ ರಸ್ತೆಯ ಮೂರು ನಂಬರ ಗೇಟ್ ಬಳಿ ಲಾರಿ ಚಾಲಕರ ಮತ್ತು ನಿರ್ವಾಹಕರ ಆರೋಗ್ಯ ಶಿಬಿರವನ್ನು ದಾಂಡೇಲಿಯಲ್ಲಿ ಎರಿ್ಡಸಲಾಗಿತ್ತು.
ಈ ಶಿಬಿರವನ್ನು ಬೆಳಗಾವಿಯ ಏಕಲ್ ಅಭಿಯಾನದ ಪ್ರಮುಖರಾದ ಡಾ. ವೈಶಾಲಿಯವರು ಉದ್ಘಾಟಿಸಿ ಮಾತನಾಡಿ ಲಾರಿ ಚಾಲಕರು ಶ್ರಮ ಜೀವಿಗಳಾಗಿದ್ದು, ಅವರ ಆರೋಗ್ಯದ ಬಗ್ಗೆ ಗಮನ ಹರಿಸುವುದು ಮುಖ್ಯವಾಗಿದೆ ಈ ಹಿನ್ನೆಲೆಯಲ್ಲಿ ನಡೆದಿರುವ ಈ ಶಿಬಿರದ ಪ್ರಯೋಜನ ಲಾರಿ ಚಾಲಕರು ಮತ್ತು ನಿರ್ವಾಹಕರು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ದಾಂಡೇಲಿಯ ಟ್ರಾನ್ಸೊ-್ಪರ್ಟ್ ಆಪರೇಟರ್ಸ ಅಸೋಸಿಯೇಶನ್ ಅಧ್ಯಕ್ಷ ಅಷತೋಶ್ಕುಮಾರ ರಾಯ್ ಅಧ್ಯಕ್ಷತೆವಹಿಸಿದ್ದರು ಶಿಬಿರದಲ್ಲಿ 60ಕ್ಕೂ ಚಾಲಕರು ಮತ್ತು ನಿರ್ವಾಹಕರಿಗೆ ಬಿ.ಪಿ. ಸಕ್ಕರೆ ಖಾಯಿಲೆ, ಕಣ್ಣು ಮತ್ತು ಇನ್ನಿತರ ಖಾಯಿಲೆಗಳ ಕುರಿತು ಆರೋಗ್ಯ ತಪಾಸಣೆ ನಡೆಸಲಾಯಿತು.
ಶಿಬಿರದಲ್ಲಿ ರಾಮನಗರದ ಡಾ. ಬಸವರಾಜ, ವಸಂತ ಬಾಳಿಗಾ, ದಾಂಡೇಲಿ ಏಕಲ್ ಅಭಿಯಾನದ ಅಧ್ಯಕ್ಷ ಮುರುಳಿಧರ ಗೋಶಿ ಏಕಲ್ ಆರೋಗ್ಯ ಸೇವಾ ಕೇಂದ್ರದ ಲ್ಯಾಬ್ ತಂತ್ರಜ್ಞೆ ರಮಾ ಗೋಲಂ ಮತ್ತಿತರರು ಪಾಲ್ಗೊಂಡಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 