ಗ್ಯಾರಂಟಿ ಯೋಜನೆಯಿಂದ ಸರ್ಕಾರದ ಅಭಿವೃದ್ಧಿ ಕಾಮಗಾರಿಗಳು ಕುಂಟಿತಗೊಂಡಿವೆ: ರಮೇಶ ಜಾರಕೀಹೋಳಿ

Government development works have been hampered by the guarantee scheme: Ramesh Jarakiholi

ಸಂಬರಗಿ, 03 : ಶಿರೂರ ಗ್ರಾಮದಲ್ಲಿ ಮಾಜಿ ಸಚಿವರು, ಬಿ.ಜೆ.ಪಿ ನಾಯಕರು ಹಾಗೂ ಹಾಲಿ ಶಾಸಕರು ರಮೇಶ ಜಾರಕೀಹೋಳಿ, ಮಾಜಿ ಸಚೀವರು ಶ್ರೀಮಂತ ಪಾಟೀಲ ಹಾಗೂ ಮಾಜಿ ಶಾಸಕರು ಮಹೇಶ ಕುಮಟಳ್ಳಿ ಇವರನ್ನು ಶಿರೂರ ಗ್ರಾಮ ಪಂಚಾಯತ ಅಧ್ಯಕ್ಷರಾದ ಬಾಳು ಹಜಾರೆ ಇವರಿಂದ ಸತ್ಕರಿಸಲಾಯಿತು. 

ಈ ವೇಳೆ ಶಾಸಕ ರಮೇಶ ಜಾರಕೀಹೋಳಿ ಮಾತನಾಡಿ ಗ್ಯಾರಂಟಿ ಯೋಜನೆಯಿಂದ ಸರ್ಕಾರದ ಅಭಿವೃದ್ಧಿ ಕಾಮಗಾರಿಗಳು ಕುಂಟಿತಗೊಂಡಿವೆ. ಮುಂಬರುವ ಚುನಾವಣೆಯಲ್ಲಿ ಜನರು ಅದಕ್ಕೆ ಉತ್ತರ ನೀಡುತ್ತಾರೆ. ಮುಂದಿನ ಚುನಾವಣೆಯಲ್ಲಿ ಬಿ.ಜೆ.ಪಿ ಸರ್ಕಾರ ಸ್ಪಷ್ಟ ಬಹುಮತದಿಂದ ಅಧಿಕಾರಿ ಚುಕ್ಕಾನಿ ಹಿಡಿಯುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.  

ಈ ವೇಳೆ ಅಪ್ಪಾ ಹಜಾರೆ, ನಾನಾಸಾಬ ಅವತಾಡೆ, ಸಿದ್ದು ಪಾಟೀಲ, ಮಲ್ಲಿಕಾರ್ಜುನ ಅಂದಾನಿ ಇನ್ನೀತರು ಉಪಸ್ಥಿತ ಇದ್ದರು.