ನಾಟಕಗಳಿಂದ ಸಮಾಜಕ್ಕೆ ಒಳ್ಳೆಯ ಸಂದೇಶ
Good message to society through plays
ಹೂವಿನಹಡಗಲಿ 26: ನಾಟಕದಿಂದ ಸಮಾಜದ ಅಂಕುಡೊಂಕು ಸರಿಪಡಿಸುತ್ತವೆ ಎಂದು ಜೆ.ಎಸ್.ಎಸ್.ಕಾಲೇಜಿನ ಉಪನ್ಯಾಸಕ ನೆಪೋಲಿಯನ್ ಹೇಳಿದರು. ತಾಲೂಕಿನ ನಂದಿಹಳ್ಳಿ ರಂಗಮಂದಿರ ಆವರಣದಲ್ಲಿ ಗುರುವಾರ ಕಂಠಿ ಬಸವೇಶ್ವರ ಸ್ವಾಮಿಯ ರಥೋತ್ಸವ ನಿಮಿತ್ತ ಗ್ರಾಮದ ಸ್ಥಳೀಯ ಕಲಾವಿದರಿಂದ "ಸಾವು ತಂದ ಸೌಭಾಗ್ಯ " ಸಾಮಾಜಿಕ ನಾಟಕ ಸಮಾರಂಭದಲ್ಲಿ ಮಾತನಾಡಿ ನಾಟಕಗಳು ಕೇವಲ ಮನರಂಜನೆಯಲ್ಲ, ಬದಲಾಗಿ ಸಾಮಾಜಿಕ ಬದಲಾವಣೆಗೆ ಪ್ರೇರೇಪಿಸುವ ಪ್ರಬಲ ಸಾಧನಗಳಾಗಿವೆ ಎಂದ ಅವರು ಕೆಲ ನಾಟಕದ ದೃಶ್ಯ ಗಳನ್ನು ಹೇಳಿದರು. ಜಿಲ್ಲಾ ಬಿಜೆಪಿ ಮುಖಂಡ ರಾದ ಎಂ.ಬಿ.ಬಸವರಾಜ ಮಾತನಾಡಿ ಸಮಾಜದ ಪ್ರತಿಬಿಂಬ ನಾಟಕಗಳು ಸಮಕಾಲೀನ ಸಮಾಜದ ವಾಸ್ತವಗಳನ್ನು, ಸಮಸ್ಯೆಗಳನ್ನು, ಮತ್ತು ಮೌಲ್ಯಗಳನ್ನು ವೇದಿಕೆಯ ಮೇಲೆ ತರುತ್ತವೆ, ಪ್ರೇಕ್ಷಕರು ತಮ್ಮನ್ನು ತಾವು ಆ ಪಾತ್ರಗಳಲ್ಲಿ ನೋಡಿಕೊಳ್ಳುವಂತೆ ಮಾಡುತ್ತವೆ ಎಂದರು. ಮಾಜಿ ಗ್ರಾ.ಪಂ.ಅದ್ಯಕ್ಷ ಕಂಠಿ ವೀರೇಶ, ವಿ.ಬಿ.ಮಲ್ಲಿಕೇಶಪ್ಪ, ಶಿಕ್ಷಕರಾದ ಅರುಣಿ ಸುರೇಶ, ವಿ.ಬಿ.ಜಗದೀಶ್, ಅರುಣಿ ಜಗದೀಶ್ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 